More

    ಚಂದ್ರಗುತ್ತಿಯ ರೇಣುಕಾಂಬಾ ದೇಗುಲದಲ್ಲಿ ನವರಾತ್ರಿ ಸಡಗರ

    ಸೊರಬ: ನಾಡ ಹಬ್ಬ ದಸರಾ ಉತ್ಸವಕ್ಕೆ ಪುರಾಣ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

    ದೇವಾಲಯದ ಆವರಣದಲ್ಲಿರುವ ಯೋಗೀಶ್ವರ ಮಠದ ಶ್ರೀ ಸುಖದೈವ್‌ನಾಥ ಜೀ ಅವರ ನೇತೃತ್ವದಲ್ಲಿ ಶರನ್ನವರಾತ್ರಿ ಮೊದಲನೇ ದಿನದ ಕಲಶ ಸ್ಥಾಪನೆ, ನವಧಾನ್ಯಗಳಿಂದ ಘಟ ಸ್ಥಾಪನೆಯೊಂದಿಗೆ ವಿಶೇಷ ಪೂಜೆ ಆರಂಭಗೊಂಡಿತು.
    ಶರನ್ನವರಾತ್ರಿಯ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ವಿ.ಎಲ್.ಶಿವಪ್ರಸಾದ್ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್ ಚಾಲನೆ ನೀಡಿದರು.
    9 ದಿನಗಳ ಕಾಲ ದೇವಾಲಯದ ಅರ್ಚಕರಾದ ಅರವಿಂದ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಲಿವೆ. ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಂ.ಲಲಿತಾ, ಕಮಲಾಕ್ಷಿ, ಶಿವಶಂಕರ್ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts