More

    ಸಾವಿನಲ್ಲೂ ಸಾರ್ಥಕತೆ: ಇಬ್ಬರು ದಾನಿಗಳಿಂದ 14 ಮಂದಿಗೆ ಮರುಜೀವ

    ಮೈಸೂರು: ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ದಾನಿಗಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇಬ್ಬರು ದಾನಿಗಳಿಂದ 14 ಮಂದಿಗೆ ಮರುಜೀವ ಸಿಕ್ಕಿದೆ.

    ಹುಣಸೂರು ಮೂಲದ ಲಾರೆನ್ಸ್(40) ಹಾಗೂ ಕುಶಾಲನಗರ ಮೂಲದ ಶೋಭಾ(48) ಎಂಬುವವರಿಂದ ಅಂಗಾಂಗ ದಾನ ಮಾಡಲಾಗಿದೆ. ಆಗಸ್ಟ್ 16 ರಂದು ಲಾರೆನ್ಸ್​ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಮೆದುಳು ನಿಷ್ಕ್ರಿಯ ಹಿನ್ನೆಲೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ.

    ಇನ್ನು ಮೆದುಳಿನ ರಕ್ತಸ್ರಾವದಿಂದ ಶೋಭಾ ಬಳಲುತ್ತಿದ್ದರು. ಇಬ್ಬರು ದಾನಿಗಳಿಂದ 4 ಮೂತ್ರಪಿಂಡಗಳು, 2 ಲಿವರ್, 4 ಹೃದಯದ ಕವಾಟ ಹಾಗೂ 4 ಕಾರ್ನಿಯಗಳು ದಾನ ಮಾಡಲಾಗಿದೆ. ಇಬ್ಬರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. (ದಿಗ್ವಿಜಯ ನ್ಯೂಸ್​​)

    ಹಾಟ್​ ಫೋಟೋ ಹರಿಬಿಟ್ಟ ಕ್ರಿಕೆಟಿಗ ಮೊಹಮ್ಮದ್​ ಶಮಿ ಪತ್ನಿ: ಹಸಿನ್​ ಮಾದಕ ನೋಟಕ್ಕೆ ನೆಟ್ಟಿಗರು ಫಿದಾ!

    ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆ: ಅಂದು ಮನೆಯ ಮೇಲೆ ನಡೆದ ಭಯಾನಕ ಘಟನೆ ಬಿಚ್ಚಿಟ್ಟ ಮಾಲೀಕ

    ದ್ವಿತೀಯ ಪಿಯು ಪರೀಕ್ಷೆ ಸುಸೂತ್ರ: ಫಲಿತಾಂಶ ತಿರಸ್ಕೃತರು ಹಾಜರು; 314 ವಿದ್ಯಾರ್ಥಿಗಳು ನೋಂದಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts