ಧಾರವಾಡ: ನಗರದ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ೯೪ನೇ ಜಾತ್ರಾ ಮಹೋತ್ಸವ ಅಂಗವಾಗಿ ಘನಮಠ ಶಿವಯೋಗಿಗಳ ಸ್ವರವಚನ ಪ್ರವಚನವು ಇಲ್ಲಿನ ಮುರುಘಾಮಠದಲ್ಲಿ ಫೆ. 5ರಿಂದ 9ರವರಗೆ ಸಂಜೆ 7ಕ್ಕೆ ಜರುಗಲಿದೆ. ಬಸವಬೆಳವಿಯ ಚರಂತೇಶ್ವರ ಮಠದ ಶ್ರೀ ಶರಣಬಸವ ದೇವರು ಪ್ರವಚನ ನೀಡುವರು.
೫ರಂದು ಸಂಜೆ ೭ಕ್ಕೆ ಪ್ರವಚನಕ್ಕೆ ಮಾಜಿ ಶಾಸಕ ಚಂದ್ರಕಾ0ತ ಬೆಲ್ಲದ ಚಾಲನೆ ನೀಡುವರು. ಶ್ರೀ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶ್ರೀ ಗುರುಲಿಂಗ ಸ್ವಾಮೀಜಿ ಸಮ್ಮುಖ ವಹಿಸುವರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಬಸವೇಶ್ವರ ರೂರಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶರಣಪ್ಪ ಕೊಟಗಿ, ಕೆ.ಎಂ.ಎಫ್ ಅಧ್ಯಕ್ಷ ಶಂಕರ ಮುಗದ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಶಿವಾನಂದ ಕಮತಗಿ, ದಯಾನಂದ ಶೇಗುಣಸಿ, ಎನ್.ಸಿ. ಕಾಡದೇವರಮಠ ಅತಿಥಿಯಾಗಿ ಪಾಳ್ಗೊಳ್ಳುವರು. ಅಂದಾನಯ್ಯ ಮಠದ, ಶಿವಯೋಗಿ ಹಿರೇಮಠ ವಚನ ಸಂಗೀತ ನಡೆಸಿಕೊಡುವರು ಎಂದು ಮುರುಘಾಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.