ಬೆಂಗಳೂರು: ಹಳೇ ದ್ವೇಷದಿಂದ ಕೂಲಿ ಕಾರ್ವಿುಕನನ್ನು ಸ್ನೇಹಿತರೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ. ಕೃಷ್ಣರಾಜ ಮಾರುಕಟ್ಟೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ. ಕಾಟನ್ಪೇಟೆ ಹತ್ತಿರದ ಭಕ್ಷಿಗಾರ್ಡನ್ ನಿವಾಸಿ ರಮೇಶ್ (24) ಕೊಲೆಯಾದವ. ಹೂವಿನ ಮಂಡಿಯ ನೌಕರನಾದ ರಮೇಶ್ ಮೇಲೆ ನಸುಕಿನ 3 ಗಂಟೆಗೆ ಹಲ್ಲೆ ನಡೆದಿದೆ. ಕೃತ್ಯ ಸಂಬಂಧ ಒಬ್ಬನನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃಷ್ಣರಾಜ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.