More

    ‘ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ ‘!

    ಮುಂಬೈ: ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸರ ಮನೋಬಲ ಹೆಚ್ಚಿಸಲು ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಬಂದಿದೆ. ಈ ರೀತಿಯಾಗಿ ಆಕರ್ಷಕವಾದ ಟ್ವೀಟ್​ಗಳನ್ನು ಮಾಡುವುದರಲ್ಲಿ ಮುಂಬೈ ಪೊಲೀಸರು ಎತ್ತಿದ ಕೈ ಎಂದೇ ಹೇಳಬೇಕು.

    ಮುಂಬೈ ಪೊಲೀಸರ ಹೊಸ ಟ್ವೀಟ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಇತ್ತೀಚೆಗೆ ತಾವು ದರೋಡೆ ಯೋಜನೆಯಲ್ಲಿದ್ದ ಹಿಸ್ಟರಿ ಶೀಟರ್​​ನನ್ನು ಬಂಧಿಸಿದ ಫೋಟೋ ಹಾಕಿ “ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ” ಎಂಬ ಮೀಮ್ ಬರೆದು ಮುಂಬೈ ಪೊಲೀಸರು ಪೋಸ್ಟ್ ಮಾಡಿದ್ದಾರೆ!

    ಇದನ್ನೂ ಓದಿ: ಮಾಜಿ ಸಿಎಂ ಸಂಬಂಧಿಕರ ಕೊಲೆ ಪ್ರಕರಣ : ಇಬ್ಬರ ಬಂಧನ

    “ದೇವರು ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಪೋಲೀಸರು ಏನು ಹಿಡಿಯುತ್ತಾರೆ” ಎಂದು 26 ವರ್ಷದ ಹಿಸ್ಟರಿ ಶೀಟರ್ ಒಬ್ಬ ಪೊಲೀಸ್ ಇನ್​ಫಾರ್ಮರ್​ಗೆ ಹೇಳಿದ್ದನಂತೆ! ಅವನು ಯೋಜಿಸಿದ್ದ ದರೋಡೆಯ ಮುನ್ನವೇ ಆತನನ್ನು ಬಂಧಿಸಿ ಅವನ ಮಾತಿಗೆ ಕ್ರಿಯೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ, ಮುಂಬೈನ ಆರೇ ಠಾಣೆ ಪೊಲೀಸರು. ಈ ರೀತಿಯಾಗಿ ಬಂಧಿಸಿ ಅವನ ದರೋಡೆಯ ಯೋಜನೆಯನ್ನು ವಿಫಲಗೊಳಿಸಿದ್ದರಿಂದ ಅವನಿಗೆ ದೇವರಲ್ಲಿ ಮತ್ತು ಪೊಲೀಸರ ಸಾಮರ್ಥ್ಯದಲ್ಲಿ ಮತ್ತೆ ವಿಶ್ವಾಸ ಮೂಡಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.

     

    ಜೊತೆಗೆ ಬಂಧನದ ಸಮಯದ ಫೋಟೋವಿನೊಂದಿಗೆ ಸ್ವಲ್ಪ ಹೆಚ್ಚು ಆತ್ಮವಿಶ್ವಾಸದೊಂದಿಗೇ ಹಾಕಿರುವ ಮೀಮ್​ ಹಲವರ ಹುಬ್ಬೇರಿಸಿದೆ. ಈ ಮೀಮ್​ನಲ್ಲಿ “ಅವನು: ದೇವರೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ. ನಾವು: ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೆ ಪೊಲೀಸರನ್ನು ಮಾಡಿದ್ದಾನೆ” ಎಂಬ ಕಾಮೆಂಟಿದೆ!(ಏಜೆನ್ಸೀಸ್)

    ಜಲಸೇನೆಯ ಸೇಲರ್​ನನ್ನು ಜೀವಂತ ಸುಟ್ಟ ಅಪಹರಣಕಾರರು

    VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts