ಮೊಳಕಾಲ್ಮೂರು: ಭಾನುವಾರ ಸೂರ್ಯಗ್ರಹಣ ಕಾರಣಕ್ಕೆ ಜನರು ಮನೆಯಿಂದ ಹೊರಬರದ ಕಾರಣ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಪಟ್ಟಣದ ಕೆಲವು ದೇವಸ್ಥಾನಗಳು ಮುಚ್ಚಿದ್ದವು. ಮನೆಗಳಲ್ಲಿ ಮಹಿಳೆಯರು ಗರಿಕೆ, ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿದ್ದರು. ಮಧ್ಯಾಹ್ನ ಗ್ರಹಣ ಮೋಕ್ಷವಾಗುತ್ತಿದ್ದಂತೆ ಮನೆ ಸ್ವಚ್ಛಗೊಳಿಸಿ ದೇವರಿಗೆ ಪೂಜೆ ಸಲ್ಲಿಸಿದರು.