ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ಗೆ ಕುರಿತಂತೆ ರಾಜಕೀಯ ನಿಲುವುಗಳು ವ್ಯತ್ಯಸ್ತವಾಗಿವೆ. ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಜತೆಗೆ ಚರ್ಚಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.
ಕರ್ನಾಟಕ ಬಂದ್ಗೆ ನನ್ನ ಬೆಂಬಲವಿದೆ. ಇದು ವೈಯಕ್ತಿಕ ಅಭಿಪ್ರಾಯವೇ ಹೊರತು ಕಾಂಗ್ರೆಸ್ ತೀರ್ಮಾನವಲ್ಲ.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಇದನ್ನೂ ಓದಿ: ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?
ರಾಜ್ಯದಲ್ಲಿ ಮರಾಠಾ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಭಾಷೆಗೂ ಮರಾಠ ಸಮುದಾಯದ ಅಭಿವೃದ್ಧಿಗೂ ಸಂಬಂಧವಿಲ್ಲ. ರಾಜ್ಯದ ನುಡಿ-ಗಡಿ ರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಕೈಬಿಡಬೇಕು. ಸಿಎಂ ಜತೆ ಮುಕ್ತವಾಗಿ ರ್ಚಚಿಸಲು ಅವಕಾಶವಿದ್ದು, ಲೋಪ-ದೋಷಗಳಿದ್ದರೆ ಸರಿಪಡಿಸಬಹುದು.
| ಬಿ.ಎ.ಬಸವರಾಜ ನಗರಾಭಿವೃದ್ಧಿ ಸಚಿವ
ಮರಾಠ ನಿಮಗ ಸ್ಥಾಪನೆಗೆ ವಿರೋಧ- ಕರ್ನಾಟಕ ಬಂದ್ಗೆ ಅನುಮತಿ ಇಲ್ಲ: ಎಡಿಜಿಪಿ