More

    ಮಣಿಪುರಿ ಯುವತಿಯನ್ನು ‘ಕರೊನಾ’ ಎಂದು ಕರೆದು, ತಂಬಾಕು ಉಗುಳಿದ ಬೈಕ್​ ಚಾಲಕ…! ಜನಾಂಗೀಯ ನಿಂದನೆಗೂ ಬಳಕೆಯಾಯ್ತಾ ವೈರಸ್​ ಹೆಸರು…

    ನವದೆಹಲಿ: ಕರೊನಾ ವೈರಸ್​ ಹೆಸರಿನಲ್ಲಿ ಯುವತಿಗೆ ಜನಾಂಗೀಯ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಮಣಿಪುರ ಮೂಲದ ಯುವತಿಯೋರ್ವಳು ದೆಹಲಿಯ ವಿಜಯ ನಗರಕ್ಕೆ ತೆರಳುತ್ತಿದ್ದಳು. ಅಲ್ಲಿಗೆ ಬೈಕ್​ನಲ್ಲಿ ಬಂದವನೋರ್ವ ಆಕೆಯನ್ನು ‘ಕರೊನಾ’ ಎಂದು ಕರೆದಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಮೈಮೇಲೆ ತನ್ನ ಬಾಯಲ್ಲಿದ್ದ ತಂಬಾಕನ್ನು (ಗುಟ್ಖಾ) ಉಗುಳಿದ್ದಾನೆ ಎನ್ನಲಾಗಿದೆ.

    ಆತ ಬಾಯಲ್ಲಿದ್ದ ತಂಬಾಕನ್ನು ಯುವತಿಯ ಟಿ-ಶರ್ಟ್​ ಮೇಲೆ ಉಗುಳಿರುವಂತಹ ಫೋಟೋಗಳೂ ವೈರಲ್​ ಆಗುತ್ತಿವೆ. ಈಶಾನ್ಯ ದೆಹಲಿಯ ಅನೇಕ ಸಾಮಾಜಿಕ ಹೋರಾಟಗಾರರು ಇದನ್ನು ಜನಾಂಗೀಯ ನಿಂದನೆ ಎಂದು ಕರೆದಿದ್ದಾರೆ. ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

    ಕರೊನಾ ವೈರಸ್ ಎಂಬುದು ಜಗತ್ತಿಗೇ ಮಾರಕವಾಗಿ ಪರಿಣಮಿಸಿದೆ. ಭಾರತದಲ್ಲಿ 400ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಸುಮಾರು 7 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

     

    ಮಣಿಪುರಿ ಯುವತಿಯನ್ನು 'ಕರೊನಾ' ಎಂದು ಕರೆದು, ತಂಬಾಕು ಉಗುಳಿದ ಬೈಕ್​ ಚಾಲಕ...! ಜನಾಂಗೀಯ ನಿಂದನೆಗೂ ಬಳಕೆಯಾಯ್ತಾ ವೈರಸ್​ ಹೆಸರು...

    ವಿಮಾನದ ಮಧ್ಯದ ಸೀಟಿನಲ್ಲಿ ಯಾರೂ ಕೂರುವಂತಿಲ್ಲ; ಕರೊನಾ ತಡೆಗಾಗಿ ಹೆಚ್ಚಿದ ಸುರಕ್ಷತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts