ಘಾಜಿಯಾಬಾದ್: ಇಲ್ಲೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಕೊನೆಗೂ ಬದುಕುಳಿದಿದ್ದಾನೆ. ಈತನ ಆತ್ಮಹತ್ಯೆಯ ಯತ್ನದ ವೇಳೆಯ ಫೇಸ್ಬುಕ್ ಲೈವ್ನಿಂದಾಗಿ ಜೀವ ಉಳಿದಿದೆ. ಪೊಲೀಸ್ ಅಧಿಕಾರಿಯೊಬ್ಬರು ಈತನ ಆತ್ಮಹತ್ಯೆ ಯತ್ನ ಯಶಸ್ವಿ ಆಗದಂತೆ ತಡೆಯುವ ಮೂಲಕ ಪ್ರಾಣ ಉಳಿಸಿದ್ದಾರೆ.
ಉತ್ತರಪ್ರದೇಶದ ಘಾಜಿಯಾಬಾದ್ನಲ್ಲಿ ಈ ಪ್ರಕರಣ ನಡೆದಿದೆ. ಅಭಯ್ ಶುಕ್ಲಾ ಎಂಬ 23 ವರ್ಷದ ವ್ಯಕ್ತಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಮಾತ್ರವಲ್ಲ, ತನ್ನ ಆತ್ಮಹತ್ಯೆ ಪ್ರಯತ್ನವನ್ನು ಫೇಸ್ಬುಕ್ನಲ್ಲಿ ಲೈವ್ ಇರಿಸಿದ್ದ.
ಆದರೆ ಘಾಜಿಯಾಬಾದ್ ಠಾಣೆಯ ಪೊಲೀಸ್ ಅಧಿಕಾರಿ ಅನಿತಾ ಚೌಹಾಣ್ ಅವರು ಅಭಯ್ ಶುಕ್ಲಾ ಜೀವವನ್ನು ಉಳಿಸಿದ್ದಾರೆ. 90 ಸಾವಿರ ರೂ. ನಷ್ಟದ ಹಿನ್ನೆಲೆಯಲ್ಲಿ ಈತ ಆತ್ಮಹತ್ಯೆಗೆ ಮುಂದಾಗುತ್ತಿರುವುದಾಗಿ ಗುರುವಾರ ರಾತ್ರಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದ. ಇವೆಲ್ಲವೂ ಫೇಸ್ಬುಕ್ನಲ್ಲಿ ಲೈವ್ ಆಗುವಂತೆ ಈತ ಮೊಬೈಲ್ಫೋನ್ ಇರಿಸಿದ್ದ.
ಈ ಲೈವ್ಗೆ ಸಂಬಂಧಿಸಿದಂತೆ ಫೇಸ್ಬುಕ್ ಮಾತೃಸಂಸ್ಥೆ ಮೆಟಾದ ಯುಎಸ್ ಕಚೇರಿಯಿಂದ ಸ್ಥಳೀಯ ಡಿಸಿಪಿ ನಿಪುಣ್ ಅಗರ್ವಾಲ್ ಅವರಿಗೆ ಅಲರ್ಟ್ ಬಂದಿತ್ತು. ಅವರು ಈ ಕುರಿತು ಅನಿತಾಗೆ ಮಾಹಿತಿ ನೀಡಿದ್ದು, ಈಕೆ ತನ್ನ ತಕ್ಷಣದ ಸ್ಪಂದನೆ ಹಾಗೂ ಸಂವಹನ ಶಕ್ತಿ ಮೂಲಕ ಅಭಯ್ ಪ್ರಾಣ ಉಳಿಸಿದ್ದಾರೆ.
‘ಉತ್ತಮ ವಿಲನ್’: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!
ವಿವಾಹಿತೆಯನ್ನೇ ಅಪಹರಿಸಿ ಇನ್ನೊಬ್ಬರಿಗೆ ಮಾರಿ ಮದುವೆ ಮಾಡಿಸಿದ ಸೋಷಿಯಲ್ ಮೀಡಿಯಾ ಫ್ರೆಂಡ್!