More

    ಜಾನುವಾರು ಸಾಗಿಸುತ್ತಿದ್ದ ಇಬ್ಬರ ಬಂಧನ

    ಮುರಗೋಡ: ಮುನವಳ್ಳಿ-ಬೈಲಹೊಂಗಲ ಮಾರ್ಗವಾಗಿ ಭಾನುವಾರ ಸಂಜೆ ಹೊಸೂರ ಬಳಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 8 ಗೋವು ವಶಕ್ಕೆ ಪಡೆದಿದ್ದಾರೆ.

    ಬೈಲಹೊಂಗಲ ಪಟ್ಟಣದ ಮಂಜುನಾಥ ದಳವಾಯಿ, ಮಹ್ಮದ್‌ಇಸಾಕ್ ಬೇಪಾರಿ ಬಂಧಿತರು. ಪರವಾನಗಿ ಇಲ್ಲದೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 2 ಎತ್ತು, 3 ಹೋರಿ, 2 ಆಕಳು, 1 ಆಕಳ ಕರುವನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದ ಆದೇಶವಾಗುವವರೆಗೆ ಜಾನುವಾರುಗಳನ್ನು ಮುರಗೋಡದ ನೀಲಕಂಠ ಸ್ವಾಮೀಜಿ ಸ್ಥಾಪಿಸಿರುವ ಗೋಶಾಲೆಗೆ ನೀಡಲಾಗಿದೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts