More

    ಸತ್ಯ, ಜ್ಞಾನದಿಂದ ಸಾಕ್ಷಾತ್ಕಾರ

    ಮೂಡುಬಿದಿರೆ: ಜ್ಞ್ಞಾನ ಹಾಗೂ ಸತ್ಯದ ಬೆಳಕು ನಮ್ಮೊಳಗೆ ಮೊದಲು ಬೆಳಗಬೇಕು. ಸತ್ಯ, ಜ್ಞಾನದ ಮೂಲಕ ಸಮ್ಯಕ್ ಜ್ಞಾನಪ್ರಾಪ್ತಿ ಮಾಡಿಕೊಂಡು ಭಗವಂತನನ್ನು ನಮ್ಮೊಳಗೆ ಕಂಡುಕೊಳ್ಳಬಹುದಾಗಿದೆ. ಲಕ್ಷದೀಪೋತ್ಸವ ಇದಕ್ಕೊಂದು ಉತ್ತಮ ರೂಪಕ ಎಂದು 108 ದಿವ್ಯ ಸಾಗರ ಮುನಿ ಮಹಾರಾಜ್ ಹೇಳಿದರು.

    ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ ರಾತ್ರಿ ಜೈನ ಮಠಾಧೀಶ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹಿರಿತನದಲ್ಲಿ ಲಕ್ಷದೀಪೋತ್ಸವಕ್ಕೆ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
    ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಸಂದೇಶ ನೀಡಿ, ಕರೊನಾ ನಿಯಂತ್ರಣಕ್ಕೆ ವಿಜ್ಞಾನಿಗಳು ಸಸ್ಯಾಹಾರಿ ಲಸಿಕೆ ತಯಾರಿಸಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಾರ್ಕಳದ ಹಿರಿಯ ವಕೀಲ ಎಂ.ಕೆ.ವಿಜಯಕುಮಾರ್, ರಾಜ್ಯಮಟ್ಟದ ಸಹಕಾರಿರತ್ನ ಪ್ರಶಸ್ತಿ ಪುರಸ್ಕೃತ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಪಿಎಚ್‌ಡಿ ಪದವಿ ಗಳಿಸಿರುವ ಧವಲಾ ಕಾಲೇಜಿನ ಡಾ.ಪದ್ಮಜಾ ಧೀರಜ್ ಅವರನ್ನು ಸನ್ಮಾನಿಸಲಾಯಿತು.

    ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ ಕುಮಾರ್, ಎ.ದಿನೇಶ ಕುಮಾರ್ ಬೆಟ್ಕೇರಿ, ಜೈನ್‌ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಚೌಟರ ಅರಮನೆ ಕುಲದೀಪ ಎಂ. ಉಪಸ್ಥಿತರಿದ್ದರು. ಆಶುಕವಿ ರವಿರಾಜ್ ಜೈನ್ ಮೂಡುಬಿದಿರೆ ಭಕ್ತಿಗಾಯನ, ಗಣೇಶಪ್ರಸಾದ್ ಜೀ ಅವರು ಕವನವಾಚನ, ಅನನ್ಯಾ ಜೈನ್ ಅವರು ಭರತನಾಟ್ಯ ಹಾಗೂ ಮಹಾರಾಷ್ಟ್ರದ ಉದ್ಗಾಂವ್‌ನ ಜೈನಸಂಗೀತ ಗಾನರತ್ನಾಕರ ಕುಬೇರ ಚೌಗುಲೆ ಅವರು ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ನೇಮಿರಾಜ್ ನಿರೂಪಿಸಿದರು. ಬಳಿಕ ಚಂದ್ರಪ್ರಭಾ ಸ್ವಾಮಿಯ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts