More

    ಬಸ್ ಗಾಜು ಒಡೆದ ಯುವಕನ ಬಂಧನ

    ಲಕ್ಷ್ಮೇಶ್ವರ: ಸಮೀಪದ ಸೂರಣಗಿ ಗ್ರಾಮದಲ್ಲಿ ಯುವಕನೊಬ್ಬ ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿ, ಬಸ್ ಮುಂಭಾಗದ ಗಾಜು ಒಡೆದಿರುವ ಘಟನೆ ಶನಿವಾರ ನಡೆದಿದೆ. ದೂರು ದಾಖಲಿಸಿಕೊಂಡಿರುವ ಪಿಎಸ್‌ಐ ಈರಪ್ಪ ರಿತ್ತಿ ಅವರು ಚಾಲಕನ ಮೇಲೆ ಹಲ್ಲೆಗೈದ ಸೂರಣಗಿ ಗ್ರಾಮದ ಪುಟ್ಟಪ್ಪ ಬಸನಗೌಡ ಪಾಟೀಲ ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.
    ಘಟನೆ ವಿವರ: ಬಸ್ ಚಾಲಕ ಗುತ್ತಲದಿಂದ ಸೂರಣಗಿ ಮುಖಾಂತರ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದಾಗ, ಸೂರಣಗಿ ಗ್ರಾಮದ ಚರ್ಚ್ ಹತ್ತಿರ ರಸ್ತೆಯಲ್ಲಿ ಪುಟ್ಟಪ್ಪ ಪಾಟೀಲ ಎಂಬಾತ ನಿಂತಿದ್ದ. ಬಸ್ ಚಾಲಕ ಸರಿಯಯುವಂತೆ ಹಾರ್ನ್ ಹಾಕಿದರು. ಇದರಿಂದ ಕೋಪಗೊಂಡ ಯುವಕ ಚಾಲಕನಿಗೆ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ಬಸ್ ಮುಂಭಾಗದ ಗ್ಲಾಸ್ ಒಡೆದಿದ್ದಾನೆ ಎಂದು ಬಸ್ ಚಾಲಕ ಪುಟ್ಟಪ್ಪ ರಾಮಪ್ಪ ಗದಿಗೆಣ್ಣವರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts