ನವದೆಹಲಿ: ಸಾಕಿದ ನಾಯಿ ಸತ್ತಾಗ ಅದರ ಅಸ್ಥಿಯನ್ನು ಗಂಗಾ ನದಿಯಲ್ಲೇ ಬಿಡಬೇಕು ಎಂದು ದೂರದ ನ್ಯೂಜಿಲ್ಯಾಂಡ್ನಿಂದ ಭಾರತಕ್ಕೆ ವ್ಯಕ್ತಿಯೊಬ್ಬ ಬಂದಿದ್ದಾನೆ.
ಬಿಹಾರದ ಪೂರ್ಣಿಯಾ ಜಿಲ್ಲೆಯವರಾದ ಪ್ರಮೋದ್ ಕುಮಾರ್ ಕಳೆದ 40 ವರ್ಷಗಳಿಂದ ನ್ಯೂಜಿಲ್ಯಾಂಡ್ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ 10 ವರ್ಷಗಳ ಹಿಂದೆ ನಾಯಿಯೊಂದನ್ನು ತಂದು ಅದಕ್ಕೆ ಲೈಕಾನ್ ಎಂಬ ಹೆಸರಿಟ್ಟಿದ್ದಾರೆ. 10 ವರ್ಷಗಳಿಂದ ಮನೆ ಮಗನಂತಿದ್ದ ಲೈಕಾನ್ ಇತ್ತೀಚೆಗೆ ಮೃತನಾಗಿದ್ದಾನೆ. ಪ್ರೀತಿಯಿಂದ ಸಾಕಿದ ನಾಯಿ ಮೃತ ಪಟ್ಟಿದ್ದರಿಂದ ನೋವಿಗೀಡಾಗ ಪ್ರಮೋದ್ ನ್ಯೂಜಿಲ್ಯಾಂಡ್ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.
ನಾಯಿಯ ಅಸ್ಥಿಯನ್ನು ಗಂಗಾ ನದಿಗೆ ಬಿಡಬೇಕೆಂದುಕೊಂಡಿದ್ದ ಪ್ರಮೋದ್ ಇತ್ತೀಚೆಗೆ ಭಾರತ ಬಂದಿದ್ದು, ಗಂಗಾ ನದಿಯಲ್ಲಿ ಲೈಕಾನ್ನ ಅಸ್ಥಿಯನ್ನು ಬಿಟ್ಟಿದ್ದಾರೆ. ಅದರ ಜತೆ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನವನ್ನೂ ಸಹ ನಡೆಸಿದ್ದಾರೆ. (ಏಜೆನ್ಸೀಸ್)