More

    ಅತ್ಯಾಚಾರವೆಸಗಿ, ಕೊಲೆಗೈದ ದುಷ್ಟರಿಗೆ ಕಠಿಣ ಶಿಕ್ಷೆಯಾಗಲಿ

    ಕುಕನೂರು: ತೆಲಂಗಾಣ ಹಾಗೂ ಉತ್ತರಪ್ರದೇಶದಲ್ಲಿ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದುರಳರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ತಾಲೂಕು ಗೋರಸೇನಾ ಸಮುದಾಯ ಹಾಗೂ ವಿವಿಧ ಸಂಘಟನೆಗಳು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.

    ಗೋರಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಎರಡು ರಾಜ್ಯಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಅಮಾನವೀಯ ಹಾಗೂ ರಾಷ್ಟ್ರಕ್ಕೆ ಕಳಂಕದಾಯವಾಗಿವೆ. ಇಂತಹ ದುಷ್ಕೃತ್ಯಗಳಿಗೆ ಶಾಶ್ವತ ಕಡಿವಾಣ ಹಾಕಬೇಕಿದೆ. ಆದರೆ, ಅಲ್ಲಿಯ ಸರ್ಕಾರಗಳು ಯಾವ ಕ್ರಮ ಕೈಗೊಳ್ಳದಿರುವುದು ವಿಷಾದದ ಸಂಗತಿ ಎಂದರು. ಬಳಿಕ ಶಿರಸ್ತೇದಾರ್ ಮಹಮ್ಮದ್ ಮುಸ್ತಾಫ್‌ಗೆ ಮನವಿ ಸಲ್ಲಿಸಿದರು.

    ಗೋರಸೇನಾ ಸಮುದಾಯದ ಪ್ರಮುಖರಾದ ಪರಶುರಾಮ ನಾಯಕ, ರಾಘವೇಂದ್ರ ಬಳಗೇರಿ, ಆನಂದ ರಾಠೋಡ್, ಚೇತನ ಬಳಗೇರಿ, ಅಮರೇಶ ಮನ್ನಾಪುರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಹಾಳಕೇರಿ, ಪ್ರಧಾನ ಕಾರ್ಯದರ್ಶಿ ಕರಬಸಯ್ಯ ಬಿನ್ನಾಳ, ಬಿಜೆಪಿ ಕಾರ್ಯಕರ್ತರಾದ ಶಶಿ ಭಜಂತ್ರಿ, ಶರಣಪ್ಪ ಛಲವಾದಿ, ರಾಮಣ್ಣ ಯಡ್ಡೋಣಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts