ಕೊಪ್ಪಳ: ನಗರಸಭೆ ಅಧಿಕಾರಿಗಳು ಶುಕ್ರವಾರ ಬೆಳಂಬೆಳಗ್ಗೆ ನಗರದಲ್ಲಿ ಪೂರೈಕೆಯಾಗುತ್ತಿದ್ದ 260 ಕೆ.ಜಿ. ಪ್ಲಾಸ್ಟಿಕ್ನ್ನು ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ನೇತೃತದ ಅಧಿಕಾರಿಗಳ ತಂಡ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದರು. ಈ ವೇಳೆ ಗಾಡಿಯೊಂದರಲ್ಲಿ 9 ಚೀಲಗಳಲ್ಲಿ 260 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ನ್ನು ಸಾಗಿಸಲಾಗುತ್ತಿತ್ತು. ಚೀಲಗಳ ಮೇಲೆ ಎಸ್ಎಸ್ಎಸ್ ಎಂದು ಬರೆದಿದ್ದು, ಯಾರ ಅಂಗಡಿಗೆ ಪೂರೈಸಲಾಗುತ್ತಿತ್ತೆಂದು ತಿಳಿದು ಬಂದಿಲ್ಲ. ಗಾಡಿ ಬಳಿ ಯಾರೋಬ್ಬರು ಸುಳಿಯದ ಕಾರಣ ವಾಹನ ಹಾಗೂ ಪ್ಲಾಸ್ಟಿಕ್ನ್ನು ವಶಕ್ಕೆ ಪಡೆಯಲಾಗಿದೆ. ಪರಿಸರ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.