ಕೊಂಡ್ಲಹಳ್ಳಿ: ಮದ್ಯದಂಗಡಿ ತೆರೆಯುವುದನ್ನೆ ಚಾತಕಪಕ್ಷಿಯಂತೆ ಕಾಯುತ್ತಿದ್ದ ಗ್ರಾಹಕರು ಸಾಮಾಜಿಕ ಅಂತರ ಕಾಪಾಡುವಲ್ಲಿ ವಿಫಲಗೊಂಡರು.
ಉರಿಬಿಸಿಲು ಲೆಕ್ಕಿಸದೇ ತಲೆಗೆ ಟವೆಲ್ ಸುತ್ತಿಕೊಂಡಿದ್ದರು. ಕೆಲವರು ಸಂಕೋಚದಿಂದ ಸಾಲಲ್ಲಿ ಹೆಜ್ಜೆ ಹಾಕಿದರೆ, ಕೆಲವರು ತಮ್ಮ ಬದಲಿಗೆ ಬೇರೆಯವರನ್ನು ಸಾಲಲ್ಲಿ ನಿಲ್ಲಿಸಿದ್ದರು. ಸಂಜೆಯವರೆಗೂ ಸಾಲಲ್ಲಿ ಕಡಿಮೆಯಾಗಲೇ ಇಲ್ಲ. ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಪದೇ ಪದೆ ಲಾಟಿಗೆ ಕೆಲಸ ಕೊಡುತ್ತಿದ್ದರು.