More

    ಕರ್ನಾಟಕ ಸೆಮಿಫೈನಲ್​ಗೆ ಪ್ರವೇಶ

    ಹುಬ್ಬಳ್ಳಿ: ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆದ 19 ವಯೋಮಿತಿಯ ಕೂಚ್ ಬಿಹಾರ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಪ್ರವಾಸಿ ತಂಡ ಮಧ್ಯಪ್ರದೇಶ ವಿರುದ್ಧ 9 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

    ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಸೋಮವಾರ ಗೆಲ್ಲಲು ದ್ವಿತೀಯ ಇನ್ನಿಂಗ್ಸ್​ನಲ್ಲಿ ಬೇಕಾಗಿದ್ದ 41ರನ್​ಗಳ ಗುರಿಯನ್ನು ಕರ್ನಾಟಕ 1 ವಿಕೆಟ್ ಕಳೆದುಕೊಂಡು ಕೇವಲ 7.1 ಓವರ್​ಗಳಲ್ಲಿ ಮುಟ್ಟಿತು. ಆರಂಭಿಕ ಬ್ಯಾಟರ್ ಪ್ರಕರ ಚತುರ್ವೆದಿ ಅಜೇಯ 29 ರನ್ ಬಾರಿಸಿದರು.

    ಇದಕ್ಕೂ ಮೊದಲು ಮಧ್ಯಪ್ರದೇಶ ದ್ವಿತೀಯ ಇನ್ನಿಂಗ್ಸ್​ನಲ್ಲಿ 187ರನ್ ಮೊತ್ತಕ್ಕೆ ಆಲೌಟ್ ಆಯಿತು. ಹಾರ್ದಿಕ ರಾಜ 5 ವಿಕೆಟ್ ಕಬಳಿಸಿ ಪ್ರವಾಸಿ ತಂಡಕ್ಕೆ ಕಡಿವಾಣ ಹಾಕಿದರು.

    ಜ. 5ರಿಂದ 8ರವರೆಗೆ ನಡೆಯಲಿರುವ ಮೊದಲ ಸೆಮಿಫೈನಲ್​ನಲ್ಲಿ ಕರ್ನಾಟಕ, ತಮಿಳುನಾಡು ತಂಡವನ್ನು ಎದುರಿಸಲಿದೆ.

    ಮಧ್ಯಪ್ರದೇಶ: 269 ಮತ್ತು 187(ಧನಂಜಯ ದಿಕ್ಷೀತ 54, ವಿಷ್ಣು ಬರದ್ವಾಜ್ 25, ಸಮಿತ ದ್ರಾವಿಡ 24ಕ್ಕೆ 3, ಹಾರ್ದಿಕ ರಾಜ 45ಕ್ಕೆ 5, ಸಮರ್ಥ ಎನ್. 18ಕ್ಕೆ 1, ಧೀರಜ್ ಗೌಡ 79ಕ್ಕೆ1).

    ಕರ್ನಾಟಕ: 416 ಮತ್ತು 1 ವಿಕೆಟ್​ಗೆ 41 (ಪ್ರಕರ ಚತುರ್ವೆದಿ 29ಅ, ವಿಷ್ಣು ಬರದ್ವಾಜ್ 14ಕ್ಕೆ 7).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts