ಯಾದಗಿರಿ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂ ಗಳ ಚೆಕ್ ಅನ್ನು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಯಾದಗಿರಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಅವರಿಗೆ ಚೆಕ್ ಹಸ್ತಾಂತರಿಸಿದರು.
ವಿವಿಧ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಅಟ್ಟಹಾಸ ಕಮ್ಮಿಯಾಗಿದ್ದು ಇದಕ್ಕೆ ಸಕರ್ಾರದ ಕ್ರಮ, ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಪತ್ರಕರ್ತರ ಹಾಗೂ ಜನತೆ ಸ್ಪಂದಿಸುತ್ತಿರುವ ರೀತಿಯೇ ಕಾರಣವಾಗಿದೆ ಎಂದು ತಿಳಿಸಿ ಸಕರ್ಾರದ ಜೊತೆಗೆ ಕರವೇ ಸದಾ ಕೈಜೋಡಿಸುತ್ತದೆ ಎಂದು ತಿಳಿಸಿದರು.
ಕರವೇ ತಾಲೂಕಾದ್ಯಕ್ಷ ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಕೊರೋನಾ ನೆಪದಲ್ಲಿ ಮರಾಠಿ ಲಾಠಿ ಬೀಸುತ್ತಿರುವ ಪೊಲೀಸರು ಪ್ರಾದೇಶಿಕತೆಯ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಲ್ಲು ಮಾಳಿಕೇರಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ಸಾಬು ಹೋರುಂಚಿ, ಹಣಮಂತ ಖಾನಳ್ಳಿ, ಕಾಶಿನಾಥ ನಾನೇಕ್ ಇನ್ನಿತರರು ಇದ್ದರು