ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) ಈ ಸಲದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 59 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಹೆಸರನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್ಡಿಕೆ ಪ್ರಶ್ನೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರಿರುವ ಆಯನೂರು ಮಂಜುನಾಥ್, ಬಿ.ಎಸ್.ಯಡಿಯೂರಪ್ಪ ಸಂಬಂಧಿ ಎನ್.ಆರ್.ಸಂತೋಷ್, ರಘು ಆಚಾರ್ ಸೇರಿದಂತೆ ಹಲವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!
ಮೂರನೇ ಪಟ್ಟಿಯಲ್ಲಿನ ಅಭ್ಯರ್ಥಿಗಳ ವಿವರ
ನಿಪ್ಪಾಣಿ: ರಾಜು ಮಾರುತಿ ಪವಾರ್.
ಚಿಕ್ಕೋಡಿ: ಸದಾಶಿವ್ ವಾಳಕೆ
ಕಾಗವಾಡ: ಮಲ್ಲಪ್ಪ ಎಂ ಚುಂಗ
ಅರಭಾವಿ: ಪ್ರಕಾಶ್ ಕಾಶ ಶೆಟ್ಟಿ.
ಯಮಕರನಮರಡಿ: ಮಾರುತಿ ಮಲ್ಲಪ್ಪ ಅಸ್ತಗಿ
ಬೆಳಗಾವಿ (ಉತ್ತರ): ಶಿವಾನಂದ ಮೂಗಲಿಹಾಳ್
ಬೆಳಗಾವಿ (ದಕ್ಷಿಣ): ಶ್ರೀನಿವಾಸ ತೋಳ್ಕರ್
ಬೆಳಗಾವಿ (ಗ್ರಾಮಾಂತರ): ಶಂಕರಗೌಡ ಪಾಟೀಲ್
ರಾಮದುರ್ಗ: ಪ್ರಕಾಶ್ ಮುಧೋಳ್
ಮುಧೋಳ: ಧರ್ಮರಾಜ್ ವಿಠಲ್ ದೊಡ್ಡಮನಿ
ತೇರದಾಳ: ಸುರೇಶ್ ಅರ್ಜುನ್ ಮಡಿವಾಳರ್
ಜಮಕಂಡಿ: ಯಾಕುಬ್ ಬಾಬಾ ಲಾಲ್ ಕಪಡೇವಾಲ್
ಬೀಳಗಿ: ರುಕ್ಮದೀನ್ ಸೌದಾಗರ್
ಬಾಗಲಕೋಟೆ: ದೇವರಾಜ ಪಾಟೀಲ್
ಹುನಗುಂದ: ಶಿವಪ್ಪ ಮಹದೇವಪ್ಪ ಬೋಲಿ
ವಿಜಯಪುರ ನಗರ: ಬಂಡೇ ನವಾಜ್ ಮಾದರಿ
ಸುರಪುರ: ಶ್ರವಣಕುಮಾರ್ ನಾಯ್ಕ
ಕಲಬುರಗಿ: ಕೃಷ್ಣಾರೆಡ್ಡಿ
ಔರಾದ್: ಜೈಸಿಂಗ್ ರಾಥೋಡ್
ರಾಯಚೂರು: ವಿನಯಕುಮಾರ್
ಮಸ್ಕಿ: ರಾಘವೇಂದ್ರ ನಾಯಕ
ಕನಕಗಿರಿ: ರಾಜಗೋಪಾಲ್
ಯಲಬುರ್ಗಾ: ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ: ಚಂದ್ರಶೇಖರ್
ಶಿರಹಟ್ಟಿ: ಹನುಮಂತಪ್ಪ ನಾಯಕ
ಗದಗ: ವೆಂಕನಗೌಡ ಗೋವಿಂದ ಗೌಡರ
ರೋಣ: ಮುಗದಮ್ ಸಾಬ್ ಮುಧೋಳ್
ನರಗುಂದ: ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ: ಹಜರತ್ ಅಲಿ ಅಲ್ಲಾಸಾಬ್
ಧಾರವಾಡ: ಮಂಜುನಾಥ ಲಕ್ಷ್ಮಣ ಹಗೇದಾರ್
ಹುಬ್ಬಳ್ಳಿ-ಧಾರವಾಡ ಕೇಂದ್ರ: ಸಿದ್ದಲಿಂಗೇಶ್ ಗೌಡ ಮಹಂತ ಒಡೆಯರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಗುರುರಾಜ ಹುಣಸಿಮರದ
ಕಲಘಟಗಿ: ವಿ.ವೀರಪ್ಪ ಬಸಪ್ಪ ಶೀಗೇಹಟ್ಟಿ
ಹಾವೇರಿ: ತುಕಾರಾಮ್ ಮಾಳಗಿ
ಬ್ಯಾಡಗಿ: ಸುನೀತಾ ಎಂ. ಪೂಜಾರ್
ಕೂಡ್ಲಗಿ: ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ: ರಘು ಆಚಾರ್
ಹೊಳಲ್ಕೆರೆ: ಇಂದ್ರಜಿತ್ ನಾಯ್ಕ್
ಜಗಳೂರು: ದೇವರಾಜ್
ಶಿವಮೊಗ್ಗ ನಗರ: ಆಯನೂರು ಮಂಜುನಾಥ
ಸೊರಬ: ಬಾಸೂರು ಚಂದ್ರೇಗೌಡ
ಸಾಗರ: ಝಾಕೀರ್
ರಾಜರಾಜೇಶ್ವರಿನಗರ: ಡಾ.ನಾರಾಯಣ ಸ್ವಾಮಿ
ಮಲ್ಲೇಶ್ವರ: ಉತ್ಕರ್ಷ್
ಚಾಮರಾಜಪೇಟೆ: ಗೋವಿಂದರಾಜು
ಚಿಕ್ಕಪೇಟೆ: ಇಮ್ರಾನ್ ಪಾಷಾ
ಪದ್ಮನಾಭನಗರ: ಬಿ.ಮಂಜುನಾಥ್
ಬಿಟಿಎಂ ಬಡಾವಣೆ: ವೆಂಕಟೇಶ್
ಜಯನಗರ: ಕಾಳೇಗೌಡ
ಬೊಮ್ಮನಹಳ್ಳಿ: ನಾರಾಯಣ ರಾಜು
ಅರಸಿಕೆರೆ: ಎನ್.ಆರ್.ಸಂತೋಷ್
ಮೂಡಬಿದಿರೆ: ಅಮರಶ್ರೀ
ಸುಳ್ಯ: ಪ್ರೊ.ವೆಂಕಟೇಶ್ ಎಚ್.ಎನ್.
ವಿರಾಜಪೇಟೆ: ಮನ್ಸೂರ್ ಅಲಿ
ಚಾಮರಾಜ: ಎಚ್.ಕೆ.ರಮೇಶ್ (ರವಿ)
ನರಸಿಂಹರಾಜ: ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ: ಮಲ್ಲಿಕಾರ್ಜುನಸ್ವಾಮಿ
ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!