ಮಳವಳ್ಳಿ: ತಾಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಚುನಾಯಿತರಾಗಿದ್ದಾರೆ.
ಗ್ರಾಮದ ಡೇರಿ ಆಡಳಿತ ಮಂಡಳಿಯ 9 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನವೀನ್ಕುಮಾರ್, ಸಿ.ಬೋರೇಗೌಡ, ಕಟ್ಟೆ ಬೋರೇಗೌಡ, ಎಸ್.ಕೃಷ್ಣ, ಟಿ.ಜಯರಾಮು, ಸಿ.ನಾಗರಾಜು, ಸಿದ್ದೇಗೌಡ, ಸುಮತಿ, ಮಮತಾ ಚುನಾಯಿತರಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಸಿಡಿಒ ರಾಮಕೃಷ್ಣ ಕಾರ್ಯನಿರ್ವಹಿಸಿದ್ದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟೇಶ್, ಮುಖಂಡರಾದ ನಾಗೇಂದ್ರ, ರಮೇಶ, ಲೋಕೇಶ್, ಸಂತೋಷ ಕುಮಾರ್, ಆನಂದ, ಉಮೇಶ್ ಇತರರಿದ್ದರು.