More

    ಸಹರಣಪುರದಲ್ಲಿರುವ ದೇವಬಂದ್​ ಸಂಘಟನೆ ಭಯೋತ್ಪಾದನೆಯ ಉಗಮಸ್ಥಾನ: ಸಚಿವ ಗಿರಿರಾಜ್ ಸಿಂಗ್ ವ್ಯಾಖ್ಯಾನ

    ಸಹರಣಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಬಗ್ಗೆ ಮಾತನಾಡುತ್ತ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇಸ್ಲಾಮಿಕ್ ಸಂಘಟನೆ ದೇವಬಂದ್​ ಭಯೋತ್ಪಾದನೆಯ ಉಗಮ ಸ್ಥಾನ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ.

    ಸಹರಣಪುರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಈ ಹಿಂದೆ ನಾನು ಹೇಳಿದ್ದೆ ಈ ದೇವಬಂದ್​ ಸಂಘಟನೆ ಆತಂಕವಾದದ ಗಂಗೋತ್ರಿ. ಜಗತ್ತಿನ ಬಹುತೇಕ ಮೋಸ್ಟ್​ ವಾಂಟೆಡ್​ ಉಗ್ರರು ಅದು ಹಫೀಜ್ ಸಯೀದ್ ಇರಬಹುದು ಅಥವಾ ಇನ್ಯಾವುದೇ ಉಗ್ರರು ಇರಬಹುದು ಎಲ್ಲರೂ ಇಲ್ಲಿಂದಲೇ ಬಂದವರು. ಇವರೆಲ್ಲ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಬದಲಾಗಿ ದೇಶವನ್ನೇ ವಿರೋಧಿಸುತ್ತಾರೆ. ಇದು ಒಂದು ರೀತಿಯ ಖಿಲಾಫತ್ ಚಳವಳಿ ಎಂದು ಹೇಳಿದ್ದಾರೆ.

    ಗಿರಿರಾಜ್ ಸಿಂಗ್ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈಗ ಈ ಹೇಳಿಕೆ ಮುಂದಿಟ್ಟುಕೊಂಡು ಸಿಎಎ ವಿರೋಧಿಸುತ್ತಿರುವವರು ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts