ಸಹರಣಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಬಗ್ಗೆ ಮಾತನಾಡುತ್ತ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇಸ್ಲಾಮಿಕ್ ಸಂಘಟನೆ ದೇವಬಂದ್ ಭಯೋತ್ಪಾದನೆಯ ಉಗಮ ಸ್ಥಾನ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ.
ಸಹರಣಪುರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಈ ಹಿಂದೆ ನಾನು ಹೇಳಿದ್ದೆ ಈ ದೇವಬಂದ್ ಸಂಘಟನೆ ಆತಂಕವಾದದ ಗಂಗೋತ್ರಿ. ಜಗತ್ತಿನ ಬಹುತೇಕ ಮೋಸ್ಟ್ ವಾಂಟೆಡ್ ಉಗ್ರರು ಅದು ಹಫೀಜ್ ಸಯೀದ್ ಇರಬಹುದು ಅಥವಾ ಇನ್ಯಾವುದೇ ಉಗ್ರರು ಇರಬಹುದು ಎಲ್ಲರೂ ಇಲ್ಲಿಂದಲೇ ಬಂದವರು. ಇವರೆಲ್ಲ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಬದಲಾಗಿ ದೇಶವನ್ನೇ ವಿರೋಧಿಸುತ್ತಾರೆ. ಇದು ಒಂದು ರೀತಿಯ ಖಿಲಾಫತ್ ಚಳವಳಿ ಎಂದು ಹೇಳಿದ್ದಾರೆ.
ಗಿರಿರಾಜ್ ಸಿಂಗ್ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈಗ ಈ ಹೇಳಿಕೆ ಮುಂದಿಟ್ಟುಕೊಂಡು ಸಿಎಎ ವಿರೋಧಿಸುತ್ತಿರುವವರು ಕೇಂದ್ರ ಸಚಿವರ ಹೇಳಿಕೆಯನ್ನು ಖಂಡಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)