More

    ಹಾಥರಸ್​ ಅತ್ಯಾಚಾರ ಪ್ರಕರಣ: ಆಮ್​ ಆದ್ಮಿ ಮುಖಂಡರ ‘ಮುಖಭಂಗ’!

    ಹಾಥರಸ್: ಉತ್ತರ ಪ್ರದೇಶದ ಹಾಥರಸ್​ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರನ್ನು ಮಾತನಾಡಿಸಲು ಹೋಗಿದ್ದ ಆಮ್​ ಆದ್ಮಿ ಪಕ್ಷದ ಮುಖಂಡರಿಗೆ ಮುಖಭಂಗ ಆಗಿದೆ.

    ಪಕ್ಷದ ದೆಹಲಿ ಮುಖಂಡರಾದ ರಾಖಿ ಬಿರ್ಲಾ ಹಾಗೂ ಅಜಯ್​ ದತ್ ಅವರೊಂದಿಗೆ ಆಪ್​ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಮಾಧ್ಯಮದವರ ಜತೆ ಮಾತನಾಡುತ್ತಿದ್ದಾಗ ಅವರ ಮುಖಕ್ಕೆ ಕಿಡಿಗೇಡಿಗಳು ಶಾಯಿ ಎಸೆದಿದ್ದಾರೆ.

    ಸಂತ್ರಸ್ತೆಯ ಮನೆಗೆ ನಮ್ಮನ್ನು ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗಿತ್ತು. ಆದರೆ ನಾವು ವಾಪಸ್​ ಬರುವಾಗ ಈ ರೀತಿ ಆಗಿದೆ. ಹಾಥರಸ್​ನಲ್ಲಿ ಇದು ಹೇಡಿತನದ ಕೆಲಸ ಎಂದಿರುವ ಆಪ್​ ಮುಖಂಡರು, ಯೋಗಿ ಸರ್ಕಾರ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಸಂತ್ರಸ್ತೆಯ ಪರ ದನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

    ಮಸಿ ಎರಚುವ ಮೂಲಕ ಯೋಗಿ ಆದಿತ್ಯನಾಥ್​ ಸರ್ಕಾರ ಹೇಡಿತನವನ್ನು ಸಾಬೀತುಪಡಿಸಿದೆ ಎಂದು ಆಪ್​ ವಕ್ತಾರ ರಾಘವ್ ಚಡ್ಡಾ ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ದುರ್ವರ್ತನೆಗೆ ಇದೇ ಸಾಕ್ಷಿ ಎಂದು ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಟೀಕಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts