ಇಂಡಿ: ಇಂಡಿ ತಾಲೂಕು ಸಮಗ್ರ ನೀರಾವರಿ ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವದಲ್ಲಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಮಂಗಳವಾರ 28 ನೇ ದಿನ ಪೂರೈಸಿದೆ.
ಹಂಚನಾಳದ ಗ್ರಾಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಹಳೆಂಬರ್ ಹಾಗೂ ಹಂಚನಾಳ ಗ್ರಾಮಸ್ಥರು ಧರಣಿಗೆ ಬೆಂಬಲಿಸಿ ಮಾತನಾಡಿದರು.
ಮಂಜುನಾಥ ಕಾಮಗೊಂಡ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ, ಮಹಿಬೂಬ್ ಬೇನೂರ, ಮಾಳು ಮ್ಯಾಕೇರಿ, ಮಲ್ಲು ಹೂನಳ್ಳಿ, ಸಂಗಮೇಶ ಗಲಗಲಿ, ಬಾಳು ರಾಠೋಡ, ತಮ್ಮಣ್ಣಗೌಡ ಬಿರಾದಾರ, ಬಸವರಾಜ ಹಂಜಗಿ, ರೇವಣಸಿದ್ಧ ಹೊಸೂರ, ಗುಂಡೂ ಬಿರಾದಾರ ಮತ್ತಿತರರಿದ್ದರು.