ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ಮತ್ತು ಶೋಫಿಯಾನ್ನಲ್ಲಿ ಗುರುವಾರ ರಾತ್ರಿಯಿಂದ ಇದುವರೆಗೂ ಮುಂದುವರಿದಿರುವ ಕಾರ್ಯಾಚರಣೆಗಳಲ್ಲಿ ಭದ್ರತಾ ಸಿಬ್ಬಂದಿ ಒಟ್ಟು 8 ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಪ್ಯಾಂಪೋರ್ನ ಮಸೀದಿಯೊಂದರಲ್ಲಿ ಗುರುವಾರ ಬೆಳಗ್ಗೆಯಿಂದ ಅಡಗಿಕೊಂಡಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಶೋಫಿಯಾನ್ನಲ್ಲಿ ಒಟ್ಟು ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಪ್ಯಾಂಪೋರ್ನ ಜಾಮೀಯ ಮಸೀದಿಯಲ್ಲಿ ಅಡಗಿಕೊಂಡಿದ್ದ ಉಗ್ರರಿಗೆ ಶರಣಾಗುವಂತೆ ಕಮಾಂಡೋಗಳು ಸೂಚನೆ ನೀಡಿದರೂ, ಉಗ್ರರು ಸಮ್ಮತಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಸೀದಿಯೊಳಗೆ ನುಗ್ಗಿದ ಕಮಾಂಡೋ ಪಡೆ ಯೋಧರು ಇದುವರೆಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇನ್ನೂ ಹಲವು ಉಗ್ರರು ಅಲ್ಲಿ ಅಡಗಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: ‘ಓಂ’ ಚಿತ್ರದಲ್ಲಿ ಮಿಂಚಿದ್ದ ರೌಡಿ ಕೊರಂಗು ಕೃಷ್ಣ!
ಈ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿ ದಿಲ್ಬಾಗ್ ಸಿಂಗ್, ಗುರುವಾರ ರಾತ್ರಿ ಸ್ಥಗಿತಗೊಳಿಸಲಾಗಿದ್ದ ಕಾರ್ಯಾಚರಣೆಯನ್ನು ಶುಕ್ರವಾರ ಬೆಳಗ್ಗೆ ಮುಂದುವರಿಸಲಾಯಿತು. ಪ್ಯಾಂಪೋರ್ನ ಮೀಜ್ನಲ್ಲಿನ ಜಾಮಿಯಾ ಮಸೀದಿಯಲ್ಲಿ ಭದ್ರತಾಪಡೆಗಳು ಒಬ್ಬ ಉಗ್ರರನನ್ನು ಹೊಡೆದುರುಳಿಸಿದ್ದರು. ಇದಾದ ಬಳಿಕ ಇನ್ನಿಬ್ಬರು ಉಗ್ರರು ಮಸೀದಿಯನ್ನು ಹೊಕ್ಕಿದ್ದಾರೆ. ಈ ಮಸೀದಿ ತುಂಬಾ ವಿಶಾಲವಾಗಿರುವ ಕಾರಣ ಭದ್ರತಾಪಡೆಗಳು ನಿರ್ದಿಷ್ಟ ತಂತ್ರಗಾರಿಕೆ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪ್ಯಾಂಪೋರ್ ಕಾರ್ಯಾಚರಣೆ ಆರಂಭಿಸಲು ಸಾಕಷ್ಟು ಸಮಯ ಹಿಡಿಯಿತು. ಮಸೀದಿಯ ಪಾವಿತ್ರ್ಯಕ್ಕೆ ಧಕ್ಕೆ ಒದಗದ ರೀತಿಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಒಳಗೆ ಅಡಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸ್ ಐಜಿ ತಿಳಿಸಿದರು.
ಶೋಫಿಯಾನ್ನ ಮುನಾಂದ್ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಗುರುವಾರದಿಂದ ಇದುವರೆಗೆ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ 8ಕ್ಕೆ ಹೆಚ್ಚಳವಾಗಿದ್ದಾಗಿ ಹೇಳಿದರು.
ಡಾನ್ ಜಯರಾಜ್ನ ಬಲಗೈ ಬಂಟನಾಗಿದ್ದ ಕೊರಂಗು ಕೃಷ್ಣ!