More

    ಬಿಜೆಪಿ ಮಿತಿಮೀರಿದರೆ ನಮ್ಮ ಬತ್ತಳಿಕೆಯಲ್ಲೂ ಬಾಣಗಳಿವೆ

    ಚಿಕ್ಕಮಗಳೂರು: ಬಿಜೆಪಿಗರು ಕಾಂಗ್ರೆಸ್ ಪಕ್ಷವನ್ನು ಉಗ್ರಗಾಮಿಗಳ ತಾಣ ಎಂದು ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ಮೊದಲು ಬಿಜೆಪಿಗರು ಬಿಡಬೇಕು. ಮಾಡುವ ಟೀಕೆಗಳು ರಚನಾತ್ಮಕವಾಗಿರಬೇಕು. ಒಂದು ವೇಳೆ ಅವರ ಟೀಕೆಗಳು ಮಿತಿಮೀರಿದರೆ ನಮ್ಮ ಬತ್ತಳಿಕೆಯಲ್ಲಿಯೂ ಬಾಣಗಳಿವೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಎಚ್ಚರಿಕೆ ನೀಡಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಉಗ್ರಗಾಮಿಗಳು ಇದ್ದಿz್ದೆÃ ಆದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದೆ ಸುಮ್ಮನೇಕೆ ಇದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಲಂಗುಲಗಾಮಿಲ್ಲದೆ ಮಾತಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಧಾಟಿಯಲ್ಲೇ ಉತ್ತರ ಕೊಡಬೇಕಾಗುತ್ತದೆ. ವೈಯಕ್ತಿಕ ನಿಂದನೆ ಯಾರೇ ಆಗಲಿ ಮಾಡಬಾರದು ಎಂದು ಹೇಳಿದರು.
    ಜಿಲ್ಲೆಯಲ್ಲಿ ೧೦ ವರ್ಷ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಅವರ ಕೊಡುಗೆ ಜಿಲ್ಲೆಗೆ ಏನು ಎಂಬುದನ್ನು ಬಿಜೆಪಿಯವರು ಮೊದಲು ಸ್ಪಷ್ಟಪಡಿಸಲಿ. ಸಂಸದೆ ಜಿಲ್ಲೆಗೆ ಯಾವುದೇ ಯೋಜನೆ ತರಲಿಲ್ಲ. ಜನಪರ ಕೆಲಸ ಮಾಡಲಿಲ್ಲ. ಜಿಲ್ಲೆಯಲ್ಲಿ ಅಡಕೆ, ಕಾಫಿ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಆ ಬಗ್ಗೆ ಚಕಾರ ಎತ್ತದೆ ಭಾವನಾತ್ಮಕ ವಿಚಾರದಲ್ಲಿ ರಾದ್ಧಂತ ಮಾಡಿದ ಪರಿಣಾಮವೇ ಸ್ವಪಕ್ಷೀಯರೇ ಅವರಿಗೆ ಗೋ ಬ್ಯಾಕ್ ಬಿಸಿ ಮುಟ್ಟಿಸಿದ್ದರು. ಇದರಿಂದ ಕ್ಷೇತ್ರದಿಂದಲೇ ಸಂಸದರು ಪಲಾಯನ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
    ರಾಜ್ಯದಲ್ಲಿ ಬಿಜೆಪಿ ಛಿದ್ರವಾಗಿದೆ. ಭಿನ್ನಾಭಿಪ್ರಾಯ ಭುಗಿಲೆದ್ದಿರುವುದಕ್ಕೆ ಕೆ.ಎಸ್.ಈಶ್ವರಪ್ಪ, ಮಾಧುಸ್ವಾಮಿ, ಪ್ರತಾಪ್ ಸಿಂಹ ಅವರೆ ನಿದರ್ಶನವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ೨೦ ಸ್ಥಾನ ಗೆಲ್ಲಲಿದೆ. ಏ.೩ ರಂದು ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.
    ಕೆಪಿಸಿಸಿ ವಕ್ತಾರ ರವೀಶ್ ಬಸಪ್ಪ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ನಿವಾಸ ಪೂಜಾರಿ ಅವರು ಇದು ದೇಶಪ್ರೇಮಿಗಳು ಮತ್ತು ದೇಶ ದ್ರೋಹಿಗಳ ನಡುವಿನ ಚುನಾವಣೆ ಎಂದಿದ್ದಾರೆ. ಈ ದೇಶದ ಸಾರ್ವಜನಿಕ ಆಸ್ತಿ ಮಾರಿದವರು, ಎಲ್‌ಐಸಿ ಮಾರಿದವರು, ಚುನಾವಣಾ ಬಾಂಡ್ ಹೆಸರಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿದವರು ದೇಶ ಪ್ರೇಮಿಗಳಾ ಎಂದು ಪ್ರಶ್ನಿಸಿದರು.
    ಮಾಜಿ ಸಚಿವ ಸಿ.ಟಿ.ರವಿ ಲೋಕಾಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದಿದ್ದಾರೆ. ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದೆ ದುರ್ಲಭವಾಗಿದೆ. ಅವರ ಅಸ್ತಿತ್ವ ಮೊದಲು ಉಳಿಸಿಕೊಂಡು ಇತರರ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.
    ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಡಿ ರಮೇಶ್, ಹಿರೇಮಗಳೂರು ರಾಮಚಂದ್ರ, ಡಿ.ಸಿ ಪುಟ್ಟೇಗೌಡ, ಜಯರಾಜ್ ಅರಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts