ಹುಮನಾಬಾದ್: ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆ ಈಡೇರಿಸಲು ಆಗ್ರಹಿಸಿ ಹುಮನಾಬಾದ್ನಲ್ಲಿ ಗುರುವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಬಸವರಾಜ ಮಾಳಗೆ, ಈಶ್ವರ ಕ್ರಾಂತಿ, ರೇಷ್ಮಾ, ಗೌಸೋದ್ದಿನ್, ಜೀವನ ಭಾಜೆ, ಶಶಿಕಾಂತ ಡಾಂಗೆ ಇತರರಿದ್ದರು.