More

    ಕುಮಾರಸ್ವಮಿ ಒಬ್ಬ ಬ್ಲ್ಯಾಕ್‌ಮೇಲರ್- ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಆರೋಪ

    ಹೊಸಪೇಟೆ: ಕನ್ನಡಪರ ಸಂಘಟನೆಯ ಕುಮಾರಸ್ವಾಮಿ ಒಬ್ಬ ಬ್ಲ್ಯಾಕ್‌ಮೇಲರ್ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಆರೋಪ ಮಾಡಿದರು.

    ಹಂಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಡೂರಿನಲ್ಲಿ ನನ್ನ ಪುತ್ರ ಸಿದ್ಧಾರ್ಥ ಸಿಂಗ್ ದೇವಸ್ಥಾನಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿರುವ ಕುಮಾರಸ್ವಾಮಿ, 50 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಶೀಘ್ರವೇ ಆಡಿಯೋ ಬಿಡುಗಡೆ ಮಾಡುವೆ. ಇನ್ನೊಬ್ಬರ ಮೂಲಕ ಹಣ ಕೇಳಿಸಿದ್ದ . ಆತನೂ ಕರೆ ಮಾಡಿದ್ದ. ಅವರ ಹಣದ ಬೇಡಿಕೆಯನ್ನು ನಾನು ಸಾರಾಸಗಟಾಗಿ ನಿರಾಕರಿಸಿದ್ದೆ. ಅದಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದರು.

    ಸಿದ್ಧಾರ್ಥ ಸಿಂಗ್ ದೇವಸ್ಥಾನದ ಜಮೀನನ್ನು ಅಕ್ರಮವಾಗಿ ನೋಂದಣಿ, ಪರಾಬಾರೆ ಮಾಡಿಲ್ಲ. ಸಂಡೂರು ಕುಮಾರಸ್ವಾಮಿ ದೇವಸ್ಥಾನಕ್ಕೆ ನಾನೂ ಬರ್ತೀನಿ. ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿಯೂ ಬರಲಿ. ನಾನು ಈ ವಿಚಾರವಾಗಿ ಕರ್ಪೂರ ಹಚ್ಚುವೆ. ಕುಮಾರಸ್ವಾಮಿ ದೇವಸ್ಥಾನದ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಈ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಏನೇ ನಿರ್ಧಾರ ಆದರೂ ಕೋರ್ಟ್‌ನಲ್ಲೇ ಆಗಲಿ ಎಂದರು.

    ಹಂಪಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ವೆಂಕಟಾಪುರ ಭಾಗದಲ್ಲಿ ರಾಕ್ ಗಾರ್ಡನ್ ಮಾದರಿಯಲ್ಲಿ ವಿಜಯನಗರ ವೈಭವ ಮರು ಸೃಷ್ಟಿಸಲು ಉದ್ದೇಶಿಸಿದ್ದೇನೆ. ಅದಕ್ಕೆ ಸಂಬಂಧಿಸಿ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೆ. ಈ ಕುರಿತು ಉನ್ನತ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿದೆ. ಈ ಬಗ್ಗೆ ಮರು ಪರಿಶೀಲಿಸಿದ ಬಳಿಕ ನ್ಯಾಯಾಲಯದ ಮೊರೆ ಹೋಗುತ್ತೇನೆ.
    | ಆನಂದ ಸಿಂಗ್, ಪ್ರವಾಸೋದ್ಯಮ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts