ಕಲಬುರಗಿ: ಶ್ರೀಶರಣಬಸವೇಶ್ವರರ ಮಹಾ ರಥೋತ್ಸವಕ್ಕೂ ಮುನ್ನಾದಿನ ಶುಕ್ರವಾರ ನಡೆದ ರಥೋತ್ಸವದ ವೇಳೆ ನಡೆದ ಅವಘಡದಲ್ಲಿ ಒರ್ವ ಗೃಹ ರಕ್ಷಕದಳದ ಸಿಬ್ಬಂದಿ ಮೃತಪಟ್ಟರೆ, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.
ಬೀದರ್ ಜಿಲ್ಲೆಯ ಚಿಟಗುಪ್ಪಾದ ಇಟಗಾ ನಿವಾಸಿ, ಗೃಹ ರಕ್ಷಕದಳದ ಸಿಬ್ಬಂದಿ ರಾಮ ಸಿದ್ದಪ್ಪ (31) ಉಚ್ಛಾಯಿ ಗಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಇನ್ನೂ ಮೂವರು ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಪೇದೆಯೊಬ್ಬರಿಗೆ ಗಾಯಗಳಾಗಿವೆ.