More

    ಜಾತಿ ವ್ಯವಸ್ಥೆ ದಾಟಿದ ಮಹಾನ್ ವ್ಯಕ್ತಿ ಅಂಬೇಡ್ಕರ್

    ಹಾವೇರಿ: ಆರು ದಶಕಗಳ ಹಿಂದೆ ನಾಗಪುರದಲ್ಲಿ ಸಮತಾ ಸಮಾಜದ ಕನಸು ಕಾಣುತ್ತಲೇ ಹಿಂದು ಧರ್ಮದಿಂದ ಮಹಾ ಪರಿನಿರ್ವಾಣದತ್ತ ಸಾಗಿದ ಡಾ.ಅಂಬೇಡ್ಕರ್ ಜಾತಿ ವ್ಯವಸ್ಥೆಯನ್ನು ದಾಟಿದ ಮಹಾ ಪಯಣಿಗ ಎಂದು ಹಾವೇರಿ ಹೆಸ್ಕಾ ಕಾರ್ಯ ನಿರ್ವಾಹಕ ಇಂಜಿನಿಯರ್ ಕೃಷ್ಣಪ್ಪ ಹೆಂಡೇಗಾರ ಹೇಳಿದರು.
    ಇಲ್ಲಿಯ ಹೆಸ್ಕಾಂ ಕಚೇರಿ ಆವರಣದ ಕಲ್ಯಾಣ ಸಂಸ್ಥೆ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವೃತ್ತ ಕಲ್ಯಾಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 67ನೇ ಮಹಾ ಪರಿನಿರ್ವಾಣ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾರಂಭದಲ್ಲಿ ವೃತ್ತ ಸಂಘಟನಾ ಕಾರ್ಯದರ್ಶಿ ಎಂ.ಎಸ್.ಕುಮ್ಮೂರ, ಲೆಕ್ಕಾಧಿಕಾರಿ ಅಮಾನುಲ್ಲಾ, ಮಂಜುನಾಥ ಕೊರವರ, ಉಪಾಧ್ಯಕ್ಷ ಸಿ.ಎನ್.ಮರಿಗೌಡರ, ರಾಮು ಭಜಂತ್ರಿ, ವಿಭಾಗ ಕಮೀಟಿಯ ಸಹ ಕಾರ್ಯದರ್ಶಿ ಮಹೇಶ ಗೂಳಪ್ಪನವರ, ಸ್ಥಳೀಯ ಸಮಿತಿಯ ಅಧ್ಯಕ್ಷ ಕೆ.ಎನ್.ಅಗಡಿ, ಶಂಕರ ಕಾಳಶೆಟ್ಟಿ, ಸಂತೋಷ ಕಲಾಲ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts