More

    ನನ್ನ ಪತಿ ಬಡವರು, ಶೋಷಿತರ ಧನಿಯಾಗುತ್ತಾರೆ; ಕಜ್ಜರಿ ತಾಂಡಾದಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಪತ್ನಿ ದೀಪಾ ಮತಯಾಚನೆ

    ರಾಣೆಬೆನ್ನೂರ: ವಿದ್ಯಾರ್ಥಿ ದಿನಗಳಿಂದಲೂ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವ ನನ್ನ ಪತಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಬೇಕು ಎಂದು ದೀಪಾ ಗಡ್ಡದೇವರಮಠ ಮನವಿ ಮಾಡಿದರು.
    ತಾಲೂಕಿನ ಕಜ್ಜರಿ ತಾಂಡಾದಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಮತಯಾಚಿಸಿದ ಅವರು, ಬಡವರ, ಶೋಷಿತರ ಮತ್ತು ಹಿಂದುಳಿದ ವರ್ಗಗಳ ಬಗೆಗೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಶ್ರಮಿಸುತ್ತಿದೆ. ಇಂತಹ ಪಕ್ಷದ ಅಭ್ಯರ್ಥಿಯಾಗಿ ನನ್ನ ಪತಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಡವರು, ಶೋಷಿತರ ಸೇವೆಗೆ ಸದಾ ಬದ್ಧವಾಗಿರುವ ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಬೆಂಬಲಿಸಬೇಕು ಎಂದರು.
    ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಬಿಜೆಪಿಯಿಂದ ಮೂರು ಬಾರಿ ಸಂಸದರಾಗಿದ್ದವರು ನಮ್ಮ ಜನರಿಗೆ ಒಮ್ಮೆಯೂ ಮುಖ ತೋರಿಸಲಿಲ್ಲ. ಈಗ ಮತ್ತೆ ಆ ಪಕ್ಷದಿಂದ ಬಸವರಾಜ ಬೊಮ್ಮಾಯಿ ಸ್ಪರ್ಧಿಸಿದ್ದಾರೆ. ಅವರೂ ಸಹಿತ ಜನರಿಗೆ ಮುಖ ತೋರಿಸದವರು. ಈ ಹಿನ್ನೆಲೆಯಲ್ಲಿ ಸದಾ ಜನಸಾಮಾನ್ಯರ ಜತೆಗಿರುವ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮತ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಹೇಳಿದರು.
    ಪಕ್ಷದ ಪ್ರಮುಖರಾದ ಪ್ರಕಾಶ ಲಮಾಣಿ, ವಿಶ್ವನಾಥ ಮಾಗಡಿ ಮಾತನಾಡಿದರು.
    ಲಂಬಾಣಿ ಉಡುಪಿನಲ್ಲಿ ಪ್ರಚಾರ
    ದೀಪಾ ಗಡ್ಡದೇವರಮಠ ಅವರು ಲಂಬಾಣಿ ಸಮುದಾಯದ ಉಡುಪು ಧರಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಗಮನ ಸೆಳೆಯಿತು. ರಾಣೆಬೆನ್ನೂರ ತಾಲೂಕಿನ ಕೂನಬೇವು, ದೇವರಗುಡ್ಡ ಹಾಗೂ ಹನುಮಾಪುರ ತಾಂಡಾಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts