ಹುಬ್ಬಳ್ಳಿ : ಅಮರಾವತಿ ಕಾಲನಿ ಮತ್ತು ತೊಳಹುಣಸೆ ಯಾರ್ಡ್ಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ಕೈಗೊಂಡಿದ್ದರಿಂದ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಫೆ. 11 ರಂದು ಎಸ್ಎಸ್ಎಸ್ ಹುಬ್ಬಳ್ಳಿ – ಚಿತ್ರದುರ್ಗ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಹರಿಹರ-ಚಿತ್ರದುರ್ಗ ಮಧ್ಯೆ ಮತ್ತು ಚಿತ್ರದುರ್ಗ- ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಚಿತ್ರದುರ್ಗ- ಹರಿಹರ ಮಧ್ಯೆ ಭಾಗಶಃ ರದ್ದುಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.