ಮುಂಬೈ: ನಾಯಕತ್ವ ನೀಡಿದರೆ ಮಾತ್ರ ಮುಂಬೈ ತಂಡಕ್ಕೆ ಮರಳುವುದಾಗಿ ಹಾರ್ದಿಕ್ ಪಾಂಡ್ಯ ವರ್ಗಾವಣೆಗೂ ಮುನ್ನವೇ ಷರತ್ತು ವಿಧಿಸಿದ್ದರು ಎಂದು ವರದಿಯಾಗಿದೆ.
ಇದಲ್ಲದೆ ಹಾರ್ದಿಕ್ ತಂಡಕ್ಕೆ ಮರಳುವ ಬಗ್ಗೆ ಏಕದಿನ ವಿಶ್ವಕಪ್ ಆರಂಭದ ವೇಳೆಯೇ ರೋಹಿತ್ ಶರ್ಮಗೆ ಮುಂಬೈ ಫ್ರಾಂಚೈಸಿ ಮಾಹಿತಿ ನೀಡಿತ್ತು. ನಂತರ ಹಾರ್ದಿಕ್ಗೆ ನಾಯಕತ್ವ ನೀಡುವ ಬಗ್ಗೆ ರೋಹಿತ್ಗೆ ಮಾಹಿತಿ ನೀಡಿದಾಗ ಅವರು, ಫ್ರಾಂಚೈಸಿ ತನ್ನ ತಂಡದ ಭವಿಷ್ಯವನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದಿದ್ದರು ಎನ್ನಲಾಗಿದೆ.
ಹರಾಜಿಗೆ ಮುನ್ನವೇ ನಾಯಕನಾಗಿ ಘೋಷಣೆ ಮಾಡಿದರೆ, ಹರಾಜಿನಲ್ಲಿ ತನಗೆ ಬೇಕಾದ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಲು ನೆರವಾಗುತ್ತದೆ ಎಂದೂ ಹಾರ್ದಿಕ್ ಹೇಳಿದ್ದರು ಎಂದೂ ಹೇಳಲಾಗುತ್ತಿದೆ.
ಟಿ10 ಕ್ರಿಕೆಟ್ನಲ್ಲೂ ಐಪಿಎಲ್ ಮಾದರಿ ಲೀಗ್ ಆರಂಭಿಸುವ ಚಿಂತನೆಯಲ್ಲಿ ಬಿಸಿಸಿಐ!