ಎರಡನೇ ಬೆಳೆಗೆ ನೀರು ಹರಿಸಿ

blank

ಗಂಗಾವತಿ: ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಏ.30ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಶ್ರೀರಾಮನಗರ ವ್ಯಾಪ್ತಿಯ ರೈತರು ಹಳೇ ಜೀರಾಳ ಕಲ್ಗುಡಿ ಬಳಿ 25ನೇ ವಿತರಣೆ ನಾಲೆ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.


ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ ಮಾತನಾಡಿ, ಎರಡನೇ ಬೆಳೆಗೆ ಏ.10ರವರೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ೋಷಿಸಿದ್ದಾರೆ. ಇದರಿಂದ ಕಾಳು ಕಟ್ಟುವ ಅವಧಿಯಲ್ಲಿ ನೀರಿನ ಕೊರತೆ ಎದುರಾಗಲಿದೆ. ಈ ಭಾಗದ ರೈತರ ಪಾಲಿನಂತೆ 120 ಥ್ರೇಡ್ ನೀರು ಹರಿಸಬೇಕು. ಆದರೆ ಅಧಿಕಾರಿಗಳು 72 ಥ್ರೇಡ್ ಮಾತ್ರ ಹರಿಸುತ್ತಿದ್ದಾರೆ. ವಿತರಣೆ ಟೇಲ್ಯಾಂಡ್ ಭಾಗದಲ್ಲಿ ಕಾಲುವೆ ಒಣಗಿಹೋಗಿದ್ದು, ಬೆಳೆಗಳಿಗೆ ನೀರಿಲ್ಲದಂತಾಗಿದೆ. ಜಲಾಶಯದಲ್ಲಿ ನೀರಿದ್ದರೂ ಅಧಿಕಾರಿಗಳ ನಿರ್ಲಕ್ಷೃದಿಂದ ನದಿಗೆ ಹರಿಸಲಾಗುತ್ತಿದ್ದು, ಕಾರ್ಖಾನೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಎರಡನೇ ಬೆಳೆಗೆ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ಹರಿಯುವ ಪ್ರಮಾಣ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು.


ರೈತರಾದ ಶರಣಬಸವ ರೆಡ್ಡಿ, ಕೆ.ಶ್ರೀನಿವಾಸ, ಮುಳ್ಳುಪುಡಿ ಶ್ರೀನಿವಾಸ, ಸೂರ್ಯಚಂದ್ರ ರಾವ್, ಸತ್ಯನಾರಾಯಣ, ಲಿಂಗನಗೌಡ, ಎ.ವಿ.ಎಸ್. ರಾಜು, ಪಂಪಾಪತಿ ಸೇರಿದಂತೆ ಶ್ರೀರಾಮನಗರ, ಜೀರಾಳ ಕಲ್ಗುಡಿ, ಅಂಜೂರಿಕ್ಯಾಂಪ್, ಬಸವಣ್ಣಕ್ಯಾಂಪ್ ಸೇರಿ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

Share This Article

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…

ಈ 3 ರಾಶಿಯಲ್ಲಿ ಜನಿಸಿದವರನ್ನು ಶಾಂತಿಯ ಪ್ರತಿರೂಪ ಎಂದು ಹೇಳಲಾಗುತ್ತೆ! ನೀವು ಯಾವ ರಾಶಿಯವರು? Zodiac Signs

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ…

Summer Tips: ಬೇಸಿಗೆಯಲ್ಲಿ ಕೆಟ್ಟ ಬೆವರು ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Summer Tips: ಬೇಸಿಗೆಯಲ್ಲಿ ಬೆವರು ವಾಸನೆಯನ್ನು ತಪ್ಪಿಸಲು, ನೀವು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ…