ಗುಜರಾತ್ನ ಕೆವಾಡಿಯಾದಿಂದ 3.5 ಕಿಮೀ ದೂರದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀ ಎತ್ತರದ ಏಕತಾ ಮೂರ್ತಿಗೆ ಆಗಸ್ಟ್ 25ರಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಸಿಬ್ಬಂದಿ ಕಾವಲು ಕಾಯಲಿದ್ದಾರೆ.
ಗೃಹ ಸಚಿವಾಲಯದ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ ಸಿಐಎಸ್ಎಫ್ನ 272 ಸಿಬ್ಬಂದಿಯನ್ನು ಏಕತಾ ಮೂರ್ತಿ ಕಾವಲಿಗೆ ನಿಯೋಜಿಸಲಾಗುವುದು ಎಂದು ಸಿಐಎಸ್ಎಫ್ ಡಿಜಿ ರಾಜೇಶ್ ರಂಜನ್ ತಿಳಿಸಿದ್ದಾರೆ. ಇದನ್ನೂ ಓದಿ: ತಂದೆಯ ಲ್ಯಾಪ್ಟಾಪ್ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿಬಿದ್ದ ಯುವತಿ: ಮುಂದೇನಾಯ್ತು?
ಕರೊನಾ ಕಾರಣದಿಂದ ಏಕತಾ ಮೂರ್ತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಮತ್ತೆ ಇಲ್ಲಿ ಪ್ರವಾಸೋದ್ಯಮ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಪ್ಟೆಂಬರ್ 2ರಿಂದ ಪ್ರವಾಸಿಗರು ಏಕತಾ ಮೂರ್ತಿ ವೀಕ್ಷಣೆಗೆ ಆಗಮಿಸಲು ಅವಕಾಶ ಕೊಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಈ ಏಕತಾ ಮೂರ್ತಿಯನ್ನು 2018ರ ಅಕ್ಟೋಬರ್ 31ರಂದು, ಸರ್ದಾರ್ ವಲ್ಲಭಭಾಯಿ ಅವರ 143ನೇ ಜನ್ಮದಿನದಂದು ಲೋಕಾರ್ಪಣೆ ಮಾಡಿದ್ದಾರೆ. 3,050 ಕೋಟಿ ರೂ.ವೆಚ್ಚದಲ್ಲಿ ಏಕತಾ ಮೂರ್ತಿಯನ್ನು ನಿರ್ಮಿಸಲಾಗಿದೆ. (ಏಜೆನ್ಸೀಸ್)
ಲಾಕ್ಡೌನ್ನಲ್ಲಿ ಕ್ರಿಕೆಟ್ ಆಡುವುದೇ ಮರೆತುಹೋಗುತ್ತೆ ಎಂದು ಹೆದರಿದ್ದ ಕೆಎಲ್ ರಾಹುಲ್!