ಗೊರೇಬಾಳ: ದೀಪಾವಳಿ ಅಂಗವಾಗಿ ಗ್ರಾಮದ ಯುವಕರು ಭಾನುವಾರ ಗ್ರಾಮದಿಂದ ಅಂಕಲಿಮಠಕ್ಕೆ ಪಾದಯಾತ್ರೆ ಕೈಗೊಂಡು ಮಂಗಳವಾರ ಪೂಜ್ಯರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಯುವಕರು ಸತತ 12 ವರ್ಷಗಳಿಂದ ಪಾದಯಾತ್ರೆ ಕೈಗೊಳ್ಳುತ್ತಿದ್ದು, ಅಂಕಲಿಮಠಕ್ಕೆ ತೆರಳಿ ಮಠದ ವೀರಭದ್ರ ಸ್ವಾಮೀಜಿಯ ಆಶೀರ್ವಾದ ಪಡೆಯುವರು. ಹನುಮೇಶ, ಭೀಮೇಶ್, ನಿರುಪಾದಿ, ಶರಣು, ದೇವರಾಜ್, ಪ್ರಶಾಂತ್, ಅನಿಲ್, ಚಾಂದ್ಪಾಷಾ, ಅಭಿಷೇಕ್, ಅಶೋಕ, ಮಾಳಿಂಗ, ಪ್ರಕಾಶ, ಆಂಜನೇಯ ಇದ್ದರು.