More

    ‘ಭಗವಂತ ಕೃಷ್ಣನೊಂದಿಗೆ ನಾನು ಸುಧಾಮನಾದ ಕ್ಷಣ’ ಎಂದು ಸಚಿನ್​ ತೆಂಡೂಲ್ಕರ್ ಜತೆಗಿನ ಫೋಟೋ ಹಾಕಿದ ಮಾಜಿ ಕ್ರಿಕೆಟರ್ ಮೊಹಮ್ಮದ್​ ಕೈಫ್​

    ಮುಂಬೈ: ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್​ ಅವರ ಸೋಷಿಯಲ್​ ಮೀಡಿಯಾ ಪೋಸ್ಟ್​ವೊಂದು ನೆಟ್ಟಿಗರ ಮನ ಗೆದ್ದಿದೆ.

    ಮೊಹಮ್ಮದ್​ ಕೈಫ್​ ಅವರು ಅತ್ಯುತ್ತಮ ಫೀಲ್ಡರ್​ ಆಗಿದ್ದವರು. 2018ರ ಜೂನ್​ 13ರಂದು ಇಂಗ್ಲೆಂಡ್​ ವಿರುದ್ಧದ ನ್ಯಾಟ್​ವೆಸ್ಟ್ ಸರಣಿಯ ಫೈನಲ್​ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. ಆ ಪಂದ್ಯವನ್ನು ಭಾರತ ಗೆದ್ದಿದೆ.

    ಅಂದು ಆ ಪಂದ್ಯದಲ್ಲಿ ಆಡಿದ್ದ ಸಚಿನ್ ತೆಂಡೂಲ್ಕರ್​ ಅವರು ನಿವೃತ್ತಿ ಪಡೆದ ಮೊಹಮ್ಮದ್​ ಕೈಫ್​ಗೆ ಶುಭ ಹಾರೈಸಿದ್ದರು. ರಿಟೈರ್​ಮೆಂಟ್​ ತೆಗೆದುಕೊಳ್ಳಲು ಅತ್ಯುತ್ತಮ ದಿನವನ್ನೇ ನೀವು ಆಯ್ಕೆ ಮಾಡಿಕೊಂಡಿದ್ದೀರಿ. ಈ ನೆನಪುಗಳು ಸದಾ ಕಾಲ ನಮ್ಮ ಮನಸಿನಲ್ಲಿ ಉಳಿಯಲಿವೆ. 2002ರಲ್ಲಿ ನೀವು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯನ್ನು ಆಡುವಾಗ ನಿಮ್ಮನ್ನು ಹರಸಿದ್ದ ದೇವರು ಇನ್ನು ಮುಂದೆ ಕೂಡ ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ನೀಡಲಿ ಎಂದು ಟ್ವೀಟ್​ ಮಾಡಿದ್ದರು.

    ಈಗ ಕೈಫ್​ ಅವರು ತಾವು ಸಚಿನ್​ ತೆಂಡೂಲ್ಕರ್​ ಅವರೊಂದಿಗೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿ, ಕೃಷ್ಣ ಪರಮಾತ್ಮನೊಂದಿಗೆ ನಾನು ಸುಧಾಮನಾದ ಕ್ಷಣ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    2 ಸಾವಿರ ರೀಟ್ವೀಟ್​ ಆಗಿದ್ದು, 19.4 ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಅಲ್ಲದೆ ಕಾಮೆಂಟ್​ ಸೆಕ್ಷನ್​ನಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಬರುತ್ತಿದೆ.

    ಮೊಹಮ್ಮದ್​ ಕೈಫ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 125 ಏಕದಿನ ಪಂದ್ಯಾವಳಿಗಳನ್ನು ಆಡಿದ್ದು 2,753ರನ್​ ಗಳಿಸಿದ್ದಾರೆ. ಎರಡು ಸೆಂಚೂರಿ ಬಾರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts