More

    ಬೆಂಕಿ ಬಿದ್ದು ಸಾಕು ಪ್ರಾಣಿಗಳ ಸಜೀವ ದಹನ: ವ್ಯಕ್ತಿಯನ್ನು ರಕ್ಷಣೆ ಮಾಡಿದ ಸ್ಥಳೀಯರು

    ಮಂಡ್ಯ: ತಾಲೂಕಿನ ತಂಡಸನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಾಡಹೆಂಚಿನ ಮನೆಗೆ ಬೆಂಕಿ ಹೊತ್ತಿಕೊಂಡು ಸಾಕುಪ್ರಾಣಿಗಳು ಸಜೀವ ದಹನಗೊಂಡಿದ್ದು, ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
    ಗ್ರಾಮದ ತಿಮ್ಮಯ್ಯ ಅವರ ಪುತ್ರ ಟಿ.ಕೃಷ್ಣ ಅವರ ಮನೆಯಲ್ಲಿ ಕುಟುಂಬದವರೆಲ್ಲ ನಿದ್ರಿಸುತ್ತಿದ್ದ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಎಲ್ಲೆಡೆ ಹರಡಿದೆ. ಅಕ್ಕಪಕ್ಕದ ಮನೆಯವರು ಬೆಂಕಿ ಕಂಡು ಕೂಗಿಕೊಂಡಾಗ ಮನೆಯಲ್ಲಿದ್ದವರು ಮತ್ತೊಂದು ಬಾಗಿಲ ಮೂಲಕ ಹೊರಬಂದಿದ್ದಾರೆ. ಈ ವೇಳೆ ಬೆಂಕಿ ಜ್ವಾಲೆಗೆ ಸಿಲುಕಿದ್ದ ಕೃಷ್ಣ ಅವರನ್ನು ಸ್ಥಳೀಯರ ರಕ್ಷಣೆ ಮಾಡಿದ್ದಾರೆ.
    ಇತ್ತ ಬೆಂಕಿಯ ಕೆನ್ನಾಲಿಗೆ ಹಸು, ಕರು, ಕೋಳಿಗಳು ಸಜೀವವಾಗಿ ದಹನವಾಗಿವೆ. ಮಾತ್ರವಲ್ಲದೆ ಗೃಹೋಪಯೋಗಿ ವಸ್ತುಗಳು, ದವಸ-ಧಾನ್ಯ, ರಸಗೊಬ್ಬರ ಸೇರಿದಂತೆ ಬೆಲೆಬಾಳುವ ಪದಾರ್ಥಗಳು ಸುಟ್ಟು ಕರಕಲಾಗಿವೆ. ಮನೆಯ ಛಾವಣಿ ಬೆಂಕಿಯ ಜ್ವಾಲೆಗೆ ಸುಟ್ಟು ಕೆಳಕ್ಕೆ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮನೆಯ ಬಹುತೇಕ ಭಾಗ ಸುಟ್ಟುಹೋಗಿತ್ತು.
    ಗಾಯಗೊಂಡಿರುವ ಕೃಷ್ಣ ಅವರಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಸುಟ್ಟು ಕರಕಲಾಗಿದ್ದ ಮನೆಯಲ್ಲಿ ಸಜೀವವಾಗಿ ದಹನಗೊಂಡಿದ್ದ ಸಾಕುಪ್ರಾಣಿಗಳ ಮೃತದೇಹ ಕಂಡ ಜನತೆ ಮಮ್ಮಲ ಮರಗುತ್ತಿದ್ದ ದೃಶ್ಯ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts