More

    ಕಳ್ಳಬಟ್ಟಿ ಅಡ್ಡೆ ಮೇಲೆ ಅಬಕಾರಿ ದಾಳಿ

    ಹಾವೇರಿ: ಜಿಲ್ಲೆಯ ಹಿರೇಕೆರೂರ ತಾಲೂಕು ಭಾವಾಪುರ ತಾಂಡಾದಲ್ಲಿ ಶನಿವಾರ ನಸುಕಿನ ಜಾವ ಅಬಕಾರಿ ಅಧಿಕಾರಿಗಳು 2 ಕಡೆ ದಾಳಿ ನಡೆಸಿ ಕಳ್ಳಬಟ್ಟಿ ತಯಾರಿಕೆ ಸಾಮಗ್ರಿ ಹಾಗೂ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡು 2 ಪ್ರಕರಣಗಳನ್ನು ದಾಖಲಿಸಿದ್ದಾರೆ.

    ಒಂದು ದಾಳಿಯಲ್ಲಿ 55 ಲೀಟರ್ ಬೆಲ್ಲದ ಕೊಳೆ, 5 ಲೀಟರ್ ಕಳ್ಳಬಟ್ಟಿ ಸಾರಾಯಿ, ಮತ್ತೊಂದು ದಾಳಿಯಲ್ಲಿ 80 ಲೀಟರ್ ಬೆಲ್ಲದ ಕೊಳೆ, 12 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಆರೋಪಿಗಳಾದ ಸುಭಾಸ ನೇಮಪ್ಪ ಮುಡಿ, ನಿಂಗಪ್ಪ ಕಮ್ಮಾರೆಪ್ಪ ಲಮಾಣಿ ಪರಾರಿಯಾಗಿದ್ದಾರೆ.

    ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತೆ ಡಾ. ಮಹಾದೇವಿಬಾಯಿ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಉಪ ಅಧೀಕ್ಷಕ ಪರಶುರಾಮ ವಡ್ಡರ, ನಿರೀಕ್ಷಕರಾದ ನಾಗಮ್ಮ ಮಣ್ಣನವರ, ಮಲ್ಲಪ್ಪ ಕುಂದಗೋಳ, ಆನಂದ ಅಡಗಲ್ಲ, ಉಪ ನಿರೀಕ್ಷಕರಾದ ತಿರುಪತಿ ಪಿ., ಲತೇಶ, ಮಲ್ಲಪ್ಪ ಹಕ್ಕಿ, ಪ್ರಕಾಶ ಹಳಕಟ್ಟಿ, ನಿಯಾಜ್​ಹ್ಮದ ಮುಜಾವರ, ಸಿಬ್ಬಂದಿ ರಂಜನ್ ಮೂರ್ತಿ, ರಮೇಶ ಪೂಜಾರ, ಸಾಧಿಕ್ ಲಕ್ಷೆ್ಮೕಶ್ವರ, ಆನಂದ ಹರಿಜನ, ಪ್ರವೀಣ, ಸಂತೋಷ ಬೆಟದೂರ, ಫಾರೂಕ ಹಿತ್ತಲಮನಿ ಇತರರು ಪಾಲ್ಗೊಂಡಿದ್ದರು.

    ಪ್ರತ್ಯೇಕ ಪ್ರಕರಣ ದಾಖಲು: ಹಿರೇಕೆರೂರ ತಾಲೂಕು ಚೊಗಚಿಕೊಪ್ಪ ತಾಂಡಾದಿಂದ ಕಚವಿಗೆ ಹೋಗುವ ರಸ್ತೆಯಲ್ಲಿ ಬೈಕ್​ಗಳನ್ನು ನಿಲ್ಲಿಸಿ ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದ ತಾಣದ ಮೇಲೆ ದಾಳಿ ನಡೆಸಿ 2 ಬೈಕ್ ಹಾಗೂ 9 ಲೀಟರ್ ಕಳ್ಳಬಟ್ಟಿಯನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು 2 ಪ್ರತ್ಯೇಕ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts