More

    ಸುಂಟಿಕೊಪ್ಪದಲ್ಲಿ ಈಸ್ಟರ್ ಆಚರಣೆ

    ಸುಂಟಿಕೊಪ್ಪ: ಯೇಸು ಕ್ರಿಸ್ತರ ಪುನರುತ್ಥಾನದ (ಈಸ್ಟರ್) ಹಬ್ಬವನ್ನು ಕ್ರೈಸ್ತರು ಭಾನುವಾರ ಇಲ್ಲಿನ ಸಂತ ಮೇರಿ ಶಾಲಾವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಂತೋಣಿ ದೇವಾಲಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಮರ್ಪಿಸಲಾಯಿತು.
    ಸಮುದಾಯದವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
    ಅಂತೋಣಿ ದೇವಾಲಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್‌ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆ ಸಮರ್ಪಿಸಿದರು. ಸಹಾಯಕ ಧರ್ಮಗುರುಗಳಾದ ನವೀನ್‌ಕುಮಾರ್, ಸಂತ ಕ್ಲಾರಾ ಕನ್ಯಾಸ್ತ್ರೀ ಕಾನ್ವೆಂಟಿನನ ತಂಡ, ಗಾಯನ ವೃಂದದವರು ಸಂಭ್ರಮಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts