More

    ನೆಮ್ಮದಿಯ ಬದುಕು ಕಟ್ಟಿಕೊಡುವವರಿಗೆ ಅಧಿಕಾರ: ಕೋಟ

    ಉಡುಪಿ: ಲೋಕಸಭಾ ಚುನಾವಣೆ ಸಾಮಾನ್ಯ ಗ್ರಾಪಂ ಚುನಾವಣೆಯಲ್ಲ. ಸಮೃದ್ಧ ಭಾರತ, ಸಮರ್ಥ ಭಾರತ ನಿರ್ಮಾಣಕ್ಕೆ ಮತದಾನ ನಡೆಯುತ್ತಿದೆ ಎಂಬುದನ್ನು ಮತಗಟ್ಟೆಗೆ ಬಂದಾಗ ಮತದಾರರು ನೆನಪಿಡಬೇಕು. ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವವರಿಗೆ ಅಧಿಕಾರ ನೀಡಬೇಕು ಎಂದು ಉಡುಪಿ&ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲಿ ಜೋಡುಕಟ್ಟೆಯಿಂದ ಸಿಟಿ ಬಸ್​ ನಿಲ್ದಾಣದ ವರೆಗೆ ನಡೆದ ಬೃಹತ್​ ಪಾದಯಾತ್ರೆ ಬಳಿಕ ಲೋಕಸಭಾ ಚುನಾವಣಾ ಪ್ರಚಾರ ಸಮಾರೋಪ ಭಾಷಣ ಮಾಡಿದರು.

    ಎಲ್ಲಾ ದೇಶಗಳಲ್ಲಿ ಆರ್ಥಿಕ ಹಿಂಜರಿತವಾದರೂ ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿರಲು ಮೋದಿ ಆಡಳಿತ ಕಾರಣವಾಗಿದೆ. ಮದ್ದುಗುಂಡುಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿಂದ ಭಾರತವೇ ರಕ್ಷಣಾ ವಸ್ತುಗಳನ್ನು ವಿದೇಶಗಳಿಗೆ ರವಾನೆ ಮಾಡುವ ಮಟ್ಟಕ್ಕೆ ಬೆಳೆದಿದೆ. ಕಾಶ್ಮೀರದಲ್ಲಿ ಝಯೋತ್ಪಾದಕರ ಹುಟ್ಟಡಗಿಸಿ ತ್ರಿವರ್ಣಧ್ವಜ ಹಾರಾಡುತ್ತಿದೆ. ಇವೆಲ್ಲವನ್ನೂ ಕಾರ್ಯಕರ್ತರು ಮತದಾರರಿಗೆ ಮನದಟ್ಟು ಮಾಡುವ ಅವಶ್ಯಕತೆ ಇದೆ ಎಂದರು.
    ಶಾಸಕ ಯಶ್ಪಾಲ್​ ಸುವರ್ಣ ಮಾತನಾಡಿ, ದೇಶ ರಕ್ಷಣೆಗಾಗಿ ಎಲ್ಲರಿಗೂ ಗಡಿಕಾಯಲು ಸಾಧ್ಯವಿಲ್ಲ. ಆದರೆ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಇಲ್ಲದೆ ಸಮರ್ಥ ಆಡಳಿತ ನೀಡುವ ಸರ್ಕಾರವನ್ನು ಅಧಿಕಾರಕ್ಕೆ ತರುವ ಅವಕಾಶವಿದ್ದು, ಈ ಮೂಲಕ ದೇಶರಕ್ಷಣೆಗೆ ಪಣತೊಡಬೇಕು. 10 ವರ್ಷಗಳಿಂದ ಮೋದಿ ಜನರ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೋವಿಡ್​ ಸಂದರ್ಭದಲ್ಲಿ ದೇಶದಲ್ಲೇ ವ್ಯಾಕ್ಸಿನ್​ ಉತ್ಪಾದನೆಗೆ ಪ್ರೋತ್ಸಾಹ ನೀಡಿ ಜನರ ಜೀವ ಉಳಿಸಿದ ಮೋದಿಯವರಿಗೆ ಮತ ನೀಡುವ ಮೂಲಕ ಧನ್ಯವಾದ ಅರ್ಪಿಸುವ ಸದಾವಕಾಶ ಲಭಿಸಿದೆ ಎಂದರು.

    ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ವಿಭಾಗ ಪ್ರಭಾರಿ ಉದಯಕುಮಾರ್​ ಶೆಟ್ಟಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ನಗರಸಭಾ ಸದಸ್ಯರಾದ ವಿಜಯಕುಮಾರ್​, ಗಿರೀಶ್​ ಅಂಚನ್​ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts