ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬೀಳಿಸುವ ಪಿತೂರಿ ಕುರಿತು ಇಂದು ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರ ಇಲ್ಲದಿದ್ದಾಗಲೇ ನನಗೆ ಮಾಹಿತಿ ಸಿಗುತ್ತಿತ್ತು, ಇನ್ನು ನಮ್ಮದೇ ಸರ್ಕಾರ ಇರುವಾಗ ಸಿಗಲ್ವಾ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುಟುಕು ಸಾಹಿತ್ಯಕ್ಕೆ ಹೊಸ ರೂಪು ಕೊಟ್ಟವರು ಜರಗನಹಳ್ಳಿ ಶಿವಶಂಕರ್: ಡಾ. ಮೂಡ್ನಾಕೂಡು ಚಿನ್ನಸ್ವಾಮಿ
“ಕೆಲವರು ಶಾಸಕರಿಗೆ ಗಾಳ ಹಾಕುತ್ತಿರುತ್ತಾರೆ. ತೊಂದರೆ ಮಾಡಬೇಕು ಎಂದೇ ಕಾಯುತ್ತಿರುತ್ತಾರೆ. ಅವರ ಕೈಯಲ್ಲಿ ಆಗಲ್ಲ ಅಂತ ಗೊತ್ತಿರುತ್ತದೆ. ಆದ್ರೆ, ಸದಾ ಸುದ್ದಿಯಲ್ಲಿರಬೇಕು ಎಂಬ ಆಸೆಯಿಂದ ಈ ರೀತಿ ಮಾಡುತ್ತಾರೆ. ನಾನು ಎಲ್ಲವನ್ನೂ ಗಮನಿಸುತ್ತಿರುತ್ತೇನೆ, ಪಕ್ಷದ ಅಧ್ಯಕ್ಷನಾಗಿ ಸುಮ್ಮನೆ ಕೂರುವುದಿಲ್ಲ” ಎಂದು ಹೇಳಿದರು.
“ಯಾರು ಎಲ್ಲಿ ಮಾತನಾಡಿದರು, ಎಲ್ಲಿ ಕರೆದರು ಎಲ್ಲವೂ ತಿಳಿಯುತ್ತದೆ ನನಗೆ. ಸರ್ಕಾರ ಇಲ್ಲದ ಸಂದರ್ಭದಲ್ಲೇ ಎಲ್ಲಾ ಮಾಹಿತಿ ಸಿಗುತ್ತಿತ್ತು. ಈಗ ನಮ್ಮದೇ ಸರ್ಕಾರ ಇದ್ದಾಗ ಸಿಗಲ್ವಾ, ವೈಯಕ್ತಿಕ ಮಾಹಿತಿ ಕೂಡ ಲಭ್ಯವಾಗುತ್ತದೆ” ಎಂದು ಹೇಳಿದರು.
ಶಾರೂಖ್ ಖಾನ್ ನಟನೆಯ ‘ಜವಾನ್’ ಚಿತ್ರದಲ್ಲಿ ವಿಜಯ್; ಅತಿಥಿ ಪಾತ್ರದಲ್ಲಿ ದಳಪತಿ ಎಂಟ್ರಿ