More

    ಕೊಪ್ಪರದ ಲಕ್ಷ್ಮಿನರಸಿಂಹ ಜಯಂತಿ ರದ್ದು, ದೇವಸ್ಥಾನ ಸಮಿತಿ ಮಾಹಿತಿ

    ದೇವದುರ್ಗ: ಕರೊನಾ ವೈರಸ್ ತಡೆಗೆ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿ, ಧಾರ್ಮಿಕ ಕಾರ್ಯಕ್ರಮ ನಿಷೇಧಿಸಿದ್ದರಿಂದ ತಾಲೂಕಿನ ಕೊಪ್ಪರ ಶ್ರೀಲಕ್ಷ್ಮಿರಂಗನಾಥ ದೇವಸ್ಥಾನದಲ್ಲಿ ಮೇ 7 ಮತ್ತು 8ರಂದು ನಡೆಯಬೇಕಾಗಿದ್ದ ಶ್ರೀ ಲಕ್ಷ್ಮಿನರಸಿಂಹ ಜಯಂತಿ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಮೂರನೇ ಹಂತದ ಲಾಕ್‌ಡೌನ್ ಮೇ 4 ರಿಂದ 17ರವರೆಗೆ ವಿಸ್ತರಣೆ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವ, ಆರಾಧನೆ ರದ್ದು ಮಾಡಲಾಗಿದೆ. ಭಕ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts