ಚಿಕ್ಕಮಗಳೂರು: ಕೋವಿಡ್-19 ನಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಇನ್ನೂ ಆರಂಭವೇ ಆಗಿಲ್ಲ. ಶಾಲೆ ಬಾಗಿಲು ಹಾಕಿ ಒಂದೂವರೆ ತಿಂಗಳಾಯ್ತ ಬಂತು, ಓದಿದ್ದು ಮರೆತು ಹೋಗುವ ಹಾಗಿದೆ. ಶಿಕ್ಷಕರು-ವಿದ್ಯಾರ್ಥಿಗಳ ಮುಖಾಮುಖಿ ಭೇಟಿಯೂ ಸಾಧ್ಯವಾಗುತ್ತಿಲ್ಲ. ಸಮೀಪದಲ್ಲೇ ಮನೆ ಪಾಠಕ್ಕಾದರೂ ಹೋಗೋಣವೆಂದರೆ ಸೋಂಕಿನ ಭೀತಿ ಜತೆಗೆ ಲಾಕ್ಡೌನ್ ಬಿಸಿ… ಮುಂದೇನು ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಮೂಲತಃ ಅಧ್ಯಾಪಕರಾಗಿದ್ದ ಮಾಜಿ ಶಾಸಕರೊಬ್ಬರು ಹತ್ತನೇ ತರಗತಿ ಮಕ್ಕಳಿಗೆ ಫೇಸ್ಬುಕ್ ಲೈವ್ ಮೂಲಕ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ!
ಇದನ್ನೂ ಓದಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2,672 ಕಾನ್ಸ್ಟೆಬಲ್, 162 ಎಸ್ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಫೇಸ್ಬುಕ್ ಲೈವ್ ನಲ್ಲಿ ಪ್ರತಿನಿತ್ಯ ಸಂಜೆ 7:30 ರಿಂದ ರಾತ್ರಿ 8:30 ವರೆಗೆ ಪಾಠ ಮಾಡುತ್ತಿದ್ದಾರೆ. ಈ ಹಿಂದೆ ಗಣಿತ ಮತ್ತು ಭೌತಶಾಸ್ತ್ರ ಅಧ್ಯಾಪಕರಾಗಿ ಕೆಲಸ ಮಾಡಿದ್ದ ಇವರು ಸದ್ಯ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ವಾರ ಗಣಿತ, ಇನ್ನೊಂದು ವಾರ ಭೌತಶಾಸ್ತ್ರ ವಿಷಯ ಭೋದಿಸಲಿದ್ದಾರೆ. ಪ್ರಸ್ತುತ ಈ ವಾರ ಗಣಿತ ತರಗತಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ ಲಾಕ್ಡೌನ್ ಆರಂಭದಿಂದಲೂ ಬಿಯರ್ ಕುಡಿಯುತ್ತಲೇ ದಿನ ಕಳೆಯುತ್ತಿದ್ದಾರೆ, ಯಾರು ಗೊತ್ತಾ?
ಮಾರ್ಚ್-ಏಪ್ರಿಲ್ ನಲ್ಲೇ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆ ಮುಂದೂಡಿ ಆದೇಶಿಸಿತ್ತು. ಸದ್ಯದಲ್ಲೇ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರು ವಿದ್ಯಾರ್ಥಿಗಳಿಗೆ ಫೇಸ್ಬುಕ್ ವಿಡಿಯೋ ಮೂಲಕ ತರಗತಿ ನಡೆಸುತ್ತಿದ್ದಾರೆ.
ತನ್ನ ಪ್ರವೃತ್ತಿ ಬಿಡದೆ ಮಕ್ಕಳಿಗೆ ಪಾಠ ಪುನರ್ ಮನನ ಮಾಡಲು ಬಂದಿರುವ ಗೆಳೆಯ ದತ್ತ ಅವರಿಗೆ ಧನ್ಯವಾದಗಳು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ದತ್ತ ಅವರ ಈ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
10th Mathematics Class 1
Ysv Datta ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಮೇ 5, 2020