ಚಿಕ್ಕಮಗಳೂರು: ದೇಶವನ್ನು ಲೂಟಿ ಮಾಡಿರುವವರ ಬಗ್ಗೆ ಹೇಳಿದರೆ ಸಿದ್ದರಾಮಯ್ಯನವರು ಏಕೆ ಮಾತನಾಡುತ್ತಾರೆ, ಅವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ಗೂ ನಮಗೂ ವೈಚಾರಿಕ ಸಂಬಂಧವಿದೆ. ನಾವು ಅದರಿಂದ ಪ್ರೇರಣೆಯಾಗಿದ್ದೇವೆ. ಅವರಿಗೆ ಟಿಪ್ಪು, ಬಾಬರ್, ಔರಂಗಜೇಬ್, ಗಜನಿ ಜತೆ ಯಾವ ಸಂಬಂಧ ಇದೆ ಎಂದು ಹೇಳಲಿ ಎಂದು ಪ್ರಶ್ನಿಸಿದ್ದಾರೆ.
ಟಿಪ್ಪು ಕಳ್ಳ, ಕನ್ನಡ ವಿರೋಧಿ, ಅತ್ಯಾಚಾರಿ ಅಂದ್ರೆ ಇವರೇಕೆ ಮುಖ ಒರೆಸಿಕೊಳ್ತಾರೆ.ಇವರಿಗೂ ಟಿಪ್ಪು-ಔರಂಗಜೇಬಿಗೂ ಏನು ಸಂಬಂಧವಿದೆ. ಇವರು ಏಕೆ ಎದೆ ಬಡಿದುಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನಮಗೆ ಬಸವಣ್ಣ, ನಾರಾಯಣಗುರು, ವಿವೇಕಾನಂದ, ರಾಮ, ಕೃಷ್ಣ, ಕನಕದಾಸರ ಜೊತೆ ಸಾಂಸ್ಕೃತಿಕ ಸಂಬಂಧವಿದೆ, ಇವರು ಕೂಡ ಗಜನಿ-ಗೋರಿ ಹಾಗೂ ಮೊಘಲರ ಬಗ್ಗೆ ಇರುವ ನಂಟನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)
ವಿಜಯವಾಣಿ, ದಿಗ್ವಿಜಯ ನ್ಯೂಸ್ ಬಿಗ್ ಇಂಪ್ಯಾಕ್ಟ್: ವಿವಾದಿತ ಚರ್ಚ್ ಕಟ್ಟಡ ಕಾಮಗಾರಿಗೆ ಬಿತ್ತು ಬ್ರೇಕ್