ಹೈದರಾಬಾದ್: ಮಾರಕ ವೈರಸ್ ಕೊರೊನಾ ಭಾರತದಲ್ಲಿ ಇಂದು ಇಬ್ಬರಿಗೆ ದೃಢಪಟ್ಟಿದೆ. ವೈರಸ್ ಪೀಡಿತರಲ್ಲಿ ಓರ್ವ ದೆಹಲಿಯವರು, ಮತ್ತೋರ್ವ ತೆಲಂಗಾಣದವರು.
ತೆಲಂಗಾಣದಲ್ಲಿ ಪತ್ತೆಯಾದ ಮಾರಕ ವೈರಸ್ ಪೀಡಿತ ಟೆಕ್ಕಿ ಬೆಂಗಳೂರಿನಿಂದ ಬಸ್ ಮುಖಾಂತರ ಹೈದರಾಬಾದ್ಗೆ ತೆರಳಿದ್ದ. ಹೀಗೆ ಬಸ್ನಲ್ಲಿ ತೆರಳಿದ್ದಾಗ ಹಲವರ ಜತೆ ಸಂಭಾಷಣೆ ಮಾಡಿದ್ದ. ಈಗ ಬಸ್ನಲ್ಲಿದ್ದ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ.
ಮಾರಕ ವೈರಸ್ ದೃಢ ಪಟ್ಟವ 24 ವರ್ಷದ ಟೆಕ್ಕಿಯಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ತೆಲಂಗಾಣದ ಆರೋಗ್ಯ ಸಚಿವ, ಬೆಂಗಳೂರಿನಿಂದ ಬಂದ ಟೆಕ್ಕಿಯನ್ನು ಪರೀಕ್ಷಿಸಲಾಗಿದ್ದು. ಆತನಲ್ಲಿ ಕೊರೊನಾ ವೈರಸ್ ದೃಢ ಪಟ್ಟಿದೆ ಎಂದು ಖಚಿತ ಪಡಿಸಿದ್ದಾರೆ. ಟಿಕ್ಕಿ ಬೆಂಗಳೂರಿನಿಂದ ಹೈದರಾಬಾದ್ಗೆ ಬಂದಿಳಿದ ಬಸ್ ಸಹ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದರು.
ಆ ಟೆಕ್ಕಿಯನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವರದಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ವರದಿಗಳು ಬಂದಿವೆ. ಅದರಲ್ಲಿ ಆತನಿಗೆ ಕೊರೊನಾ ಇರುವುದು ದೃಢ ಪಟ್ಟಿದೆ ಎಂದು ಸಚಿವ ಈಟೇಲ ರಾಜೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. (ಏಜೆನ್ಸೀಸ್)