More

    ಕಾಂಗ್ರೆಸ್‌ನ ನೀತಿ ದೇಶಕ್ಕೆ ಅಪಾಯಕಾರಿ

    ಬೇಲೂರು : ಈ ಬಾರಿಯ ಚುನಾವಣೆ ದೇಶ ಉಳಿಸುವ ಚುನಾವಣೆ. ಜಾತಿ ಆಧಾರದ ಮೇಲೆ ನಡೆಯುವ ಚುನಾವಣೆಯಲ್ಲ, ನೀತಿ ಮೇಲೆ ನಡೆಯುವ ಚುನಾವಣೆಯಾಗಿದ್ದು, ನೀತಿಯ ಮೇಲೆ ಮತ ಹಾಕಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
    ತಾಲೂಕಿನ ಗೆಂಡೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ನಾಗೇನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೂ ಶಕ್ತಿ ನೀಡಬೇಕು, ಭಾರತ ಆತ್ಮನಿರ್ಭರವಾಗಿ ಸ್ವಾವಲಂಬಿಯಾಗಬೇಕು. ಮೋದಿ ನನ್ನ ಪರಿವಾರ ಎಂದಿದ್ದು 140 ಕೋಟಿ ಜನರನ್ನು. ಆದರೆ ಕಾಂಗ್ರೆಸ್ ಜಾತಿವಾದ ಮಾಡಿಕೊಂಡು ಬರುತ್ತಿದೆ. ಆದರೆ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ ಎಂದರು.
    ಪಾಕಿಸ್ತಾನ ಜಿಂದಾಬಾದ್, ಕುಕ್ಕರ್ ಬಾಂಬ್ ಇಟ್ಟವರು ಕಾಂಗ್ರೆಸ್ ಜತೆಗೇ ಇದ್ದಾರೆ. ಇವರನ್ನು ಹೀಗೆ ಬಿಟ್ಟರೆ ವಿಧಾನಸೌಧಕ್ಕೂ ಇಡುತ್ತಾರೆ. ಎಲ್ಲ ಮುಸಲ್ಮಾನರೂ ಕೆಟ್ಟವರಲ್ಲ. ಬಾಂಬ್ ಇಡುವವರು ಎಂತಹವರು ಎಂದು ಯೋಚಿಸಬೇಕಿದೆ. ಕಾಂಗ್ರೆಸ್‌ನ ನೀತಿ ಅಪಾಯಕಾರಿಯಾಗಿದೆ. ಸಿದ್ದರಾಮಯ್ಯರ ಆರ್ಥಿಕ ನೀತಿ ಹೇಗಿದೆ ಎಂದರೆ ಗಂಡನ ಹತ್ತಿರ ಕಿತ್ತು ಹೆಂಡತಿಗೆ ಕೊಟ್ಟಂತಿದೆ. ಕೇಂದ್ರ ಕೊಟ್ಟ ಅಕ್ಕಿಯನ್ನು ರಾಜ್ಯ ಸರ್ಕಾರ ನಾನು ಕೊಟ್ಟೆ ಎಂದು ಸುಳ್ಳು ಹೇಳುತ್ತಿದೆ. ಆದ್ದರಿಂದ ನಾವುಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

    ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಲೂಕು ಅಧ್ಯಕ್ಷ ಆನಂದ್, ಕೇಂದ್ರ ತೆಂಗು ನಾರು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತಸುಬ್ಬರಾಯ, ಮುಖಂಡರಾದ ನಾಗರಾಜು, ಚಂದ್ರೇಗೌಡ, ನಂದಕುಮಾರ್, ಗೆಂಡೇಹಳ್ಳಿ ಕುಮಾರ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts