More

    ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಆಪ್ತರ ಬೇಸರ; ಕಾಂಗ್ರೆಸ್​​ನಲ್ಲೂ ಅಸಮಾಧಾನದ ಹೊಗೆ

    ಬೀದರ್: ಕೊವಿಡ್​-19ರ ಬಿಕ್ಕಟ್ಟಿನ ನಡುವೆ ರಾಜಕೀಯ ಪಕ್ಷಗಳಲ್ಲೂ ಅಸಮಾಧಾನ, ಭಿನ್ನಮತ ಶುರುವಾಗಿದೆ. ಕಾಂಗ್ರೆಸ್​ನಲ್ಲೂ ಅತೃಪ್ತಿಯ ಹೊಗೆಯಾಡುತ್ತಿದೆ ಎಂಬುದು ಇಂದು ಬೀದರ್​​ನಲ್ಲಿ ಬಹಿರಂಗವಾಗಿದೆ.

    ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೂ ಮೊದಲೇ ಅವರ ಬಗ್ಗೆ ಶಾಸಕ ಬಿ.ನಾರಾಯಣ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಕೈಯಿಗೆ ಸಿಗೋದೇ ಇಲ್ಲ ಎಂದು ಅವರು ದೂರಿದ್ದಾರೆ.
    ಡಿ.ಕೆ.ಶಿವಕುಮಾರ್​ ಅವರ ಎದುರು ನಾವು ನಿಂತರೂ ಅವರು ನಮ್ಮನ್ನು ನೋಡುವುದಿಲ್ಲ. ನಮಸ್ಕಾರ ಮಾಡಿದರೂ ಮಾಡುವುದಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣ್​ ಅವರು ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ.

    ಇದನ್ನೂ ಓದಿ: PHOTOS: ಪ್ರಿಯಕರನ ಮೋಸಕ್ಕೆ ಬಲಿಯಾದ ನಟಿ ಚಂದನಾರ ಸಂತೋಷದ ಕ್ಷಣಗಳು…

    ಈ ಸಭೆಯಲ್ಲಿ ಮಾಜಿ ಸಚಿವರಾದ ರಾಜಶೇಖರ್​ ಪಾಟೀಲ್​, ರಹೀಂ ಖಾನ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಎದುರಲ್ಲೇ ಶಾಸಕ ಬಿ.ನಾರಾಯಣ್​ ಹೀಗೆ ಹೇಳಿದ್ದಾರೆ. ಬಿ.ನಾರಾಯಣ್​ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರೊನಾ ಸೋಂಕಿನ ಭೀತಿ: ಮುಖ್ಯಮಂತ್ರಿ ಹಾಗೂ ಸಚಿವರು ಕ್ವಾರಂಟೈನ್​ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts