More

    ಎಣ್ಣೆ ಸ್ನಾನದ ಹಬ್ಬಕ್ಕೆ ಕರೊನಾ ಎಫೆಕ್ಟ್

    ಚಿತ್ರದುರ್ಗ: ಯುಗಾದಿ ಹಬ್ಬವನ್ನು ಈ ಬಾರಿ ಮನೆಯಲ್ಲಿದ್ದೇ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಹಬ್ಬಕ್ಕೆಂದು ಪರಸ್ಥಳಗಳಿಂದ ಬಂಧುಗಳನ್ನು ಕರೆಸಿಕೊಳ್ಳುವುದು, ಬೇರೆ ಊರುಗಳಿಗೆ ತೆರಳುವುದು ಮಾಡದಿರಿ, ಸರಳವಾಗಿ ಮನೆಯಲ್ಲಿ ಪೂಜೆ ಮಾಡಿ ಹಬ್ಬ ಆಚರಿಸಿ, ಅಂದು ದೇವಾಯಗಳಿಗೆ ಭೇಟಿ ಬೇಡವೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದೇವಾಲಯ ಸೇರಿ ಎಲ್ಲಿಯೂ ಅನ್ನಸಂತರ್ಪಣೆ ಮಾಡದಂತೆ ನಿಷೇಧ ಹೇರಲಾಗಿದೆ. ಪ್ರಸಾದ, ತೀರ್ಥ ಕೊಡುವಂತಿಲ್ಲ. ಈ ಸೋಂಕು ಹತೋಟಿಗೆ ಸಾಮಾಜಿಕ ಅಂತರವೊಂದೇ ಮದ್ದು ಎಂದರು.

    ಜಿಲ್ಲೆಯಲ್ಲಿ ಸೋಂಕಿನ ಪ್ರಕರಣ ವರದಿ ಆಗಿಲ್ಲವಾದರೂ ಎಚ್ಚರಿಕೆ ವಹಿಸಬೇಕಿದ್ದು, ನಾಗರಿಕರ ಸಹಕಾರ ಅತೀ ಮುಖ್ಯ. ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗಿರುವುದರಿಂದ ಗಡಿಭಾಗಗಳಲ್ಲಿ ಆರೋಗ್ಯ ತಪಾಸಣೆಗೆ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

    ಜಿಪಂ ಸಿಇಒ ಎಸ್.ಹೊನ್ನಾಂಬ, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಡಿಎಚ್‌ಒ ಡಿ.ಎಸ್.ಪಾಲಾಕ್ಷ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts