More

    ನಿಶ್ಚಿತಾರ್ಥದ ಬೆನ್ನಲ್ಲೇ ಕೈಕೊಟ್ಟ ವರ: ಮದ್ವೆ ಮುನ್ನ ಗೋವಾ ಭೇಟಿಯ ಕರಾಳತೆ ಬಿಚ್ಚಿಟ್ಟ ವಧು!

    ಹಾಸನ: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಇನ್ನು ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ ವರನೊಬ್ಬ ವಧುವಿಗೆ ಕೈಕೊಟ್ಟಿರುವ ಘಟನೆ ಹಾಸನದಲ್ಲಿ ನಡೆದಿದ್ದು, ವಧುವಿನ ಕುಟುಂಬ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

    ಹಾಸನದ ಬೇಲೂರು ಗ್ರಾಮವೊಂದರ ನಿವಾಸಿ ಕಾವ್ಯಾಗು ಮತ್ತು ಚಿಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿನ್ನಿಗ ಗ್ರಾಮದ ನಿಶ್ಚಿತ್​ ಸಿ.ಎಸ್​. ಪ್ರೇಮಿಗಳ ದಿನಾಚರಣೆ (ಫೆ.14)ಯಂದು ನಿಶ್ಚಿತಾರ್ಥ ನೇರವೇರಿದೆ. ಇದೇ ಮೇ 09ಕ್ಕೆ ಮದುವೆ ದಿನಾಂಕ ನಿಗದಿಯಾಗಿದ್ದು, ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದೆ.

    ಇದನ್ನೂ ಓದಿರಿ: Web Exclusive | ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಾಧಿಸಿದ ಅರ್ಜುನ್; 195 ರಾಷ್ಟ್ರ, ರಾಜಧಾನಿಗಳನ್ನು ಗುರ್ತಿಸುವ ಪ್ರತಿಭಾವಂತ

    ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಆಗಬೇಕು. ಹೋಳಿಗೆ ಊಟ, ವಿಡಿಯೋಗ್ರಫಿ ಬೇಕು ಎಂದು ನಿಶ್ಚಿತ್​ ಪಾಲಕರು ಬೇಡಿಕೆ ಇಟ್ಟಿದ್ದರು. ಅದರಂತೆಯೇ ವಧುವಿನ ತಂದೆ ಎಲ್ಲವನ್ನೂ ಅದ್ಧೂರಿಯಾಗಿಯೇ ಮಾಡಿಕೊಟ್ಟಿದ್ದರು. ಆದರೆ, ವರನೀಗ ಮದುವೆ ಬೇಡ ಎಂದ ಉಲ್ಟಾ ಹೊಡೆಯುತ್ತಿದ್ದಾನೆ. ಇದರಿಂದ ಮನನೊಂದ ವಧು ಆತ್ಮಹತ್ಯೆಗು ಯತ್ನಿಸಿದ್ದಾಳೆ.

    ಈ ಬಗ್ಗೆ ಅರೆಹಳ್ಳಿ ಠಾಣೆ ಮೆಟ್ಟಿಲೇರಿದ್ರು ವಧುವಿನ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಹಾಸನ ಎಸ್ಪಿ ಕಚೇರಿಗೆ ವಧು ಹಾಗೂ ಪೋಷಕರು ದೂರು ನೀಡಿದ್ದಾರೆ. ದೂರಿನಲ್ಲಿ ಮದುವೆಗೂ ಮುಂಚೆ ನಿಶ್ಚಿತ್​, ನನ್ನನ್ನು ಗೋವಾಗೆ ಕರೆದುಕೊಂಡ ಹೋದರು. ಹೇಳಿದಂತೆ ಕೇಳಲು ಒತ್ತಾಯಿಸಿದರು. ಆದರೆ, ನಾನು ಒಪ್ಪಲಿಲ್ಲ. ಇದೇ ಕಾರಣಕ್ಕೆ ನನ್ನ ಮೇಲೆ ಕೋಪಿಸಿಕೊಂಡರು. ಬಳಿಕ ನಿಶ್ಚಿತ್​ ಮತ್ತು ಅವರ ತಾಯಿ ನನ್ನ ಮೇಲೆ ಸಂದೇಹ ವ್ಯಕ್ತಪಡಿಸಿ, ನನ್ನ ವ್ಯಕ್ತಿತ್ವ ಸರಿಯಿಲ್ಲ ಇಂದು ಕುಂಟು ನೆಪ ಹೇಳಿ ಮದುವೆ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ವಧು ಆರೋಪಿಸಿದ್ದಾರೆ.

    ಇದನ್ನೂ ಓದಿರಿ: ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್​ಕುಮಾರ್

    ನಿಶ್ಚಿತ್​ ನನ್ನೆದುರು ಬಂದು ಮಾತನಾಡುವುದುಕ್ಕೂ ತಯಾರಿಲ್ಲ. ನಾನು ಆತನನ್ನೇ ಮದುವೆಯಾಗುವುದು. ಇದು ನನ್ನ ಮರ್ಯಾದೆ ಪ್ರೆಶ್ನೆ. ಇಲ್ಲವಾದರೆ ನಾನು ಸಾಯುತ್ತೇನೆಂದು ವಧು ಹೇಳಿದ್ದಾಳೆ. ಮೇ 9ಕ್ಕೆ ಆತನ ಜತೆಯೇ ನನ್ನ ಮಗಳ ಮದುವೇ ಮಾಡಿಯೇ ತೀರುತ್ತೇನೆಂದು ವಧುವಿನ ತಂದೆ ಯುವರಾಜ್ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರ್ಯಾಂಕ್​ ಹೆಸರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಭಾರತದ ಯೂಟ್ಯೂಬರ್​ಗಳಿಗೆ ಕಾದಿದೆ ಸಂಕಷ್ಟ!

    ಮತ್ತೆ ಒಂದಾದ ಹರ್ಷ-ಶಿವರಾಜ್ ಕುಮಾರ್: ವೇದನಾದ ಶಿವಣ್ಣ

    ‘ಕೃಷ್ಣ ಟಾಕೀಸ್’: ಹೆದರಿಸಲು ಬಂದ್ರು ಅಜೇಯ್-ಅಪೂರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts