ಬುಲಂದ್ಶಹರ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್ ಸಾರಂಗ್ (85) ಶನಿವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೈಲಾಶ್ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ 12 ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಮೃತರು ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೈಲಾಶ್ ಅವರ ಮಗ ವಿಶ್ವಾಸ್ ಸಾರಂಗ್ ಮಧ್ಯಪ್ರದೇಶ ಸರ್ಕಾರ ಸಚಿವರಾಗಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿಯನ್ನೇ ರದ್ದುಪಡಿಸುವುದಕ್ಕೆ ಇದು ಸಕಾಲ: ಅಕ್ರಮಗಳ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ
ಕೈಲಾಶ್ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮಧ್ಯಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಕೈಲಾಶ್ ಸಾರಂಗ್ ಜೀ ಅವರು ಅವಿರತ ಶ್ರಮ ವಹಿಸಿದ್ದರು. ಮಧ್ಯಪ್ರದೇಶದ ಏಳಿಗೆಗೆ ಸಹಾನುಭೂತಿ ಮತ್ತು ಕಠಿಣ ಕೆಲಸ ಮಾಡುವ ನಾಯಕರಾಗಿಯೇ ನಮ್ಮ ನಡುವೆ ಅವರು ಉಳಿಯಲ್ಲಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
Shri Kailash Sarang Ji made stupendous efforts to strengthen the BJP across Madhya Pradesh. He will be remembered as a compassionate and hardworking leader, committed to MP’s progress. Anguished by his demise. Condolences to his family and well-wishers. Om Shanti.
— Narendra Modi (@narendramodi) November 14, 2020
ಕುಟುಂಬ ಹಾಗೂ ಬಂಧುಬಳಗದವರಿಗೆ ಓಂ ಶಾಂತಿ ಎನ್ನುವ ಮೂಲಕ ಪ್ರಧಾನಿ ಮೋದಿ ಸಾಂತ್ವಾನ ಹೇಳಿದ್ದಾರೆ. (ಏಜೆನ್ಸೀಸ್)
ಮದುವೆಯಾದ ಹತ್ತೇ ದಿನದಲ್ಲಿ ಹಬ್ಬದ ದಿವಸದಂದೇ ದುರಂತ ಸಾವಿಗೀಡಾದ ನವದಂಪತಿ..!